ಶಿವಮೊಗ್ಗ ಶಾಸಕರು ಉತ್ತರ ಕರ್ನಾಟಕದ ವಿರೋಧಿಗಳು: ಲಕ್ಷ್ಮಣ್ ಸವದಿ

Update: 2023-12-12 10:04 GMT

ಬೆಳಗಾವಿ: ‘ಬೆಳಗಾವಿ ಜಿಲ್ಲೆಯಲ್ಲಿನ ಕಬ್ಬು ಬೆಳೆಗಾರರಿಗೆ ಅವಮಾನ ಮಾಡುತ್ತಿದ್ದೀರಿ. ಈ ಭಾಗದ ಜನತೆಗೆ ನಿಮ್ಮನ್ನ ಕಬ್ಬಿನಿಂದಲೇ ಹೊಡೆದುಹಾಕುತ್ತಾರೆ. ನಿಮಗೆ ಏನಾದರೂ ಮಾನ-ಮಾರ್ಯದೆ ಇದೆಯಾ?’ ಎಂದು ಕಾಂಗ್ರೆಸ್ ಸದಸ್ಯ ಲಕ್ಷ್ಮಣ್ ಸವದಿ, ಬಿಜೆಪಿ ಸದಸ್ಯ ಚನ್ನಬಸಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಮಂಗಳವಾರ ವಿಧಾನಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚೆಯ ವೇಳೆ ಲಕ್ಷ್ಮಣ್ ಸವದಿ ಮಾತನಾಡುತ್ತಿದ್ದ ವೇಳೆ, ಸದನದ ಬಾವಿಗಿಳಿದು ಧರಣಿ ನಡೆಸಿ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ್ದರಿಂದ ಕೆರಳಿ ಅವರು, ‘ಶಿವಮೊಗ್ಗದ ಶಾಸಕರು ಹೆಂಗೆ ಕೂಗಾಡುತ್ತಾರೆ ನೋಡಿ. ಇವರಿಗೆ ಬೀಗ ಕೊಟ್ಟು ಯಾರು ಕಳುಹಿಸಿದ್ದಾರೆಂಬುದು ಗೊತ್ತಿದೆ’ ಎಂದು ಛೇಡಿಸಿದರು.

‘ನಿಮ್ಮ ಜನ್ಮಕ್ಕೆ ನಾಚಿಗೆಯಾಗಬೇಕು. ನಿಮ್ಮನ್ನು ಕಬ್ಬಿನಿಂದಲೇ ರೈತರು ಹೊಡೆದುಹಾಕುತ್ತಾರೆ. ಶಿವಮೊಗ್ಗದವರು ಉತ್ತರ ಕರ್ನಾಟಕ ವಿರೋಧಿಗಳು’ ಎಂದು ಬಿಜೆಪಿ ಸದಸ್ಯ ಚನ್ನಬಸಪ್ಪ ವಿರುದ್ಧ ಲಕ್ಷ್ಮಣ್ ಸವದಿ ಕಿಡಿಕಾರಿದರು.

ಸ್ಪೀಕರ್ ಯು.ಟಿ.ಖಾದರ್ ಸಮಾಧಾನ ಮಾಡಲು ಪ್ರಯತ್ನಿಸಿದರೂ, ಪ್ರಯೋಜನವಾಗಲಿಲ್ಲ. ಚನ್ನಬಸಪ್ಪ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ ಲಕ್ಷ್ಮಣ್ ಸವದಿ, ‘ನಿಮಗೆ ಹುಚ್ಚುನಾಯಿ ಕಡಿದಿದೆಯಾ? ಎಂದು ಕೂಗಾಡಿದರು. ಇದೇ ವೇಳೆ ಕೆಲವು ಸಕ್ಕರೆ ಕಾರ್ಖಾನೆ ಮಾಲಕರು ರೈತರಿಗೆ ಮೋಸ ಮಾಡುತ್ತಿದ್ದು, ಅವರು ಸರಕಾರವನ್ನು ವಂಚಿಸಬಹುದು. ಆದರೆ, ದೇವರನ್ನಲ್ಲ. ಅವರಿಗೆ ಪಾಶ್ವವಾರ್ಯು ಆಗಲಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News