10 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2023-09-02 13:17 GMT

ಬೆಂಗಳೂರು, ಸೆ.2: ರಾಜ್ಯ ಸರಕಾರವು ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ 10 ಮಂದಿ ಐಪಿಎಸ್ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.

ಮಂಗಳೂರು ನಗರ ಡಿಸಿಪಿ(ಕಾನೂನು ಮತ್ತು ಸುವ್ಯವಸ್ಥೆ)-ಸಿದ್ಧಾರ್ಥ ಗೋಯಲ್, ಉಡುಪಿ ಜಿಲ್ಲೆಯ ನಕ್ಸಲ್ ನಿಗ್ರಹ ದಳದ ಎಸ್ಪಿ-ಜಿತೇಂದ್ರ ಕುಮಾರ್ ದಯಾಮ, ಸಿಐಡಿ ಎಸ್ಪಿ-ಪೃಥ್ವಿಕ್ ಶಂಕರ್, ಸಿಐಡಿ ಎಸ್ಪಿ-ಕನಿಕಾ ಸಿಕ್ರಿವಾಲ್, ಗುಪ್ತಚರ ದಳದ ಎಸ್ಪಿ-ಗುಂಜನ್ ಆರ್ಯ, ಗುಪ್ತಚರ ದಳದ ಎಸ್ಪಿ-ಕೌಶಲ್ ಚೌಕ್ಸೆಯನ್ನು ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ ನಗರ ಡಿಸಿಪಿ(ಕಾನೂನು ಮತ್ತು ಸುವ್ಯವಸ್ಥೆ)-ರೋಹನ್ ಜಗದೀಶ್, ರಾಜ್ಯ ಮೀಸಲು ಪೊಲೀಸ್ ಪಡೆಯ ಒಂದನೆ ಬ್ಯಾಟಲಿಯನ್‍ನ ಕಮಾಂಡರ್-ಎಂ.ಎನ್.ದೀಪನ್, ಭಯೋತ್ಪಾದನಾ ನಿಗ್ರಹ ಕೇಂದ್ರದ ಎಸ್ಪಿ-ಶಿವಾಂಶು ರಾಜ್‍ಪೂತ್ ಹಾಗೂ ಬೆಂಗಳೂರು ವೈರ್‍ಲೆಸ್ ವಿಭಾಗದ ಎಸ್ಪಿಯಾಗಿ ಎಚ್.ಎನ್. ಮಿಥುನ್ ಅವರನ್ನು ವರ್ಗಾವಣೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News