ಸಾಗರ: ಕಿರುತೆರೆ ನಟಿ ಮೇಲೆ ಮಾರಣಾಂತಿಕ ಹಲ್ಲೆ

Update: 2023-07-04 06:52 GMT

ಸಾಗರ: ಕಿರುತೆರೆ ಮತ್ತು ಚಲನಚಿತ್ರ ನಟಿಯ ಮೇಲೆ ಮಾರಣಾಂತಿಕ ಹಲ್ಲೆ ಆಗಿರುವ ಘಟನೆ ಸಾಗರ ತಾಲೂಕಿನ ಉಳ್ಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾಸ್ಪಾಡಿಯಲ್ಲಿ ನೆಡೆದಿರುವ ಬಗ್ಗೆ ವರದಿಯಾಗಿದೆ.

ಗಾಯಗೊಂಡ ನಟಿಯನ್ನು ಅನು ಗೌಡ ಎಂದು ಗುರುತಿಸಲಾಗಿದೆ. ಜಮೀನನ ವಿವಾದದಿಂದ ಅನುಗೌಡ ಮೇಲೆ ಹಲ್ಲೆ ನೆಡೆಸಲಾಗಿದ್ದು, ಸದ್ಯ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎನ್ನಲಾಗಿದೆ.

ಚಲನಚಿತ್ರ ನಟಿ ಆಗಿದ್ದ ಅನೂಗೌಡ ಹಲವು ಚಲನ ಚಿತ್ರದಲ್ಲಿ ಮತ್ತು ಕಿರುತೆರೆಯಲ್ಲಿ ನಟಿಸಿದ್ದರು. ಕಾಸ್ಪಡಿಯಲ್ಲಿ ಜಮೀನು ನೋಡಿಕೊಳ್ಳುತ್ತಿದ್ದ ಅನು ಗೌಡ ಅಪ್ಪ ಅಮ್ಮ ವಾಸವಾಗಿದ್ದರು. ಬೆಂಗಳೂರಿನಿಂದ ಅಗಾಗ ಬರುತ್ತಿದ್ದ ಅನು ಗೌಡ ಅವರಿಗೆ ಸ್ಥಳೀಯ ನೀವಾಸಿಗಳಾದ ನೀಲಮ್ಮ ಮತ್ತು ಮೋಹನ್ ಜಮೀನಿನ ವಿಚಾರದಲ್ಲಿ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದ್ದು, ಸಾಗರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.






Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News