ಉಡುಪಿ ಜಿಲ್ಲಾ ರಾಜ್ಯೋತ್ಸವ ಸನ್ಮಾನಕ್ಕೆ ಡಾ.ಗಣನಾಥ ಎಕ್ಕಾರು, ಆಯಿಷಾ ಕಾರ್ಕಳ ಸೇರಿದಂತೆ 29 ಮಂದಿ, ಐದು ಸಂಸ್ಥೆಗಳು ಆಯ್ಕೆ

Update: 2023-10-31 15:54 GMT

ಡಾ.ಗಣನಾಥ ಎಕ್ಕಾರು, ಆಯಿಷಾ ಕಾರ್ಕಳ

ಉಡುಪಿ, ಅ.31: ಕನ್ನಡ, ತುಳು ಜಾನಪದ ವಿದ್ವಾಂಸ, ಲೇಖಕ, ನಿವೃತ್ತ ಪ್ರಾಂಶುಪಾಲ, ಪ್ರಶಸ್ತಿ ವಿಜೇತ ಎನ್ನೆಸ್ಸೆಸ್ ಅಧಿಕಾರಿ ಡಾ.ಗಣನಾಥ ಎಕ್ಕಾರು, ಆಯಿಷಾ ಕಾರ್ಕಳ ಸೇರಿದಂತೆ ಒಟ್ಟು 29 ಮಂದಿ ಸಾಧಕರನ್ನು ಹಾಗೂ ಐದು ಸಂಘಸಂಸ್ಥೆಗಳನ್ನು 2023ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಇಂದು ಸಂಜೆ ಬಿಡುಗಡೆ ಗೊಳಿಸಿದ ರಾಜ್ಯೋತ್ಸವ ಸನ್ಮಾನಿತರ ಪಟ್ಟಿ ಕೆಳಗಿನಂತಿದೆ.

ಯಕ್ಷಗಾನ: ಮಹಾಬಲ ನಾಯಕ್ ಬೆಳಿಂಜೆ ಹೆಬ್ರಿ ತಾಲೂಕು, ಉಪ್ಪುಂದ ನಗೇಂದ್ರ ರಾವ್ ಬೈಂದೂರು ತಾಲೂಕು, ಅಜ್ರಿ ಗೋಪಾಲ ಗಾಣಿಗ ಕುಂದಾಪುರ ತಾಲೂಕು, ಹಾವಂಜೆ ಮಂಜುನಾಥ ರಾವ್ ಬ್ರಹ್ಮಾವರ ತಾಲೂಕು, ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ ಬ್ರಹ್ಮಾವರ ತಾಲೂಕು.

ದೈವಾರಾಧನೆ: ಬೀರು ಪಾಣಾರ ನೀರೆ ಗ್ರಾಮ ಕಾರ್ಕಳ, ಕೆ.ಗೋವಿಂದ ಬಂಗೇರ ಕಣಜಾರು ಗ್ರಾಮ ಕಾರ್ಕಳ, ಅಶೋಕ ಶೆಟ್ಟಿ ಮಾಳ ಕಾರ್ಕಳ.

ರಂಗಭೂಮಿ: ಗಂಗಾಧರ ಕಿದಿಯೂರು ಅಂಬಲಪಾಡಿ ಉಡುಪಿ.

ಚಿತ್ರಕಲೆ: ಬಿ.ಕೃಷ್ಣ ದೇವಾಡಿಗ ಉಪ್ಪುಂದ ಕುಂದಾಪುರ.

ಸಂಗೀತ: ಸುರೇಶ್ ಸಾಲಿಯಾನ್ ಮುಡಾರು ಗ್ರಾಮ ಬಜಗೋಳಿ ಕಾರ್ಕಳ

ಭರತನಾಟ್ಯ: ವಿಧುಷಿ ಭಾಗೀರಥಿ ಎಂ.ರಾವ್ ಬಡಗುಬೆಟ್ಟು ಉಡುಪಿ.

ಸಾಹಿತ್ಯ: ಜ್ಯೋತಿ ಗುರುಪ್ರಸಾದ್, ಕಾರ್ಕಳ

ನಾಟಿವೈದ್ಯೆ: ಕೆ.ವಸಂತಿ ತಂತ್ರಿ ಉಳಿಯಾರಗೋಳಿ ಗ್ರಾಮ ಕಾಪು, ಭೋಜು ನಾಯ್ಕ, ಶೇಡಿಮನೆ ಗ್ರಾಮ ಹೆಬ್ರಿ.

ಪಾಕತಜ್ಞ: ಪಿ.ಯಜ್ಞನಾರಾಯಣ ಭಟ್, ಕುಕ್ಕಿಕಟ್ಟೆ 76 ಬಡಗುಬೆಟ್ಟು ಉಡುಪಿ.

ವೈದ್ಯಕೀಯ: ಡಾ.ಎ.ಸುಬ್ಬಣ್ಣ ಶೆಟ್ಟಿ ಪರ್ಕಳ ಉಡುಪಿ.

ಕ್ರೀಡೆ: ಆಯುಷ್ ಶೆಟ್ಟಿ ಕಾರ್ಕಳ, ವಿದ್ಯಾ ಯು.ಶೆಟ್ಟಿ ಕುಕ್ಕುಂದೂರು ಕಾರ್ಕಳ, ಪ್ರಥ್ವಿರಾಜ್ ಶೆಟ್ಟಿ (ದಿವ್ಯಾಂಗ) ಕುಂದಾಪುರ.

ಸಂಕೀರ್ಣ: ಡಾ.ಗಣನಾಥ ಶೆಟ್ಟಿ ಎಕ್ಕಾರು ಅಂಬಲಪಾಡಿ ಉಡುಪಿ

ಕೃಷಿ: ಎ.ಭಾಸ್ಕರ ಪೂಜಾರಿ ನಡೂರು ಗ್ರಾಮ ಬ್ರಹ್ಮಾವರ, ಬಾಬು ಆಚಾರ್ಯ ಹೇರೂರು ಗ್ರಾಮ ಬೈಂದೂರು, ಜಯರಾಮ ಶೆಟ್ಟಿ ಕೋಟತಟ್ಟು ಗ್ರಾಮ ಬ್ರಹ್ಮಾವರ.

ಹೊರನಾಡ ಕನ್ನಡಿಗರು: ಪ್ರವೀಣ್ ಶೆಟ್ಟಿ ಪುತ್ತೂರು ಸಂತೆಕಟ್ಟೆ, ಉಡುಪಿ.

ಸಮಾಜ ಸೇವೆ: ಆಸ್ಟೀನ್ ಕುಮಾರ್ ಕಟಪಾಡಿ, ಕೋಟೆ ಗ್ರಾಮ ಕಾಪು, ಎಚ್.ಭಾಸ್ಕರ ಜೋಯಿಸ್ ಹೆಬ್ರಿ, ಆಯಿಷಾ ಕಾರ್ಕಳ.

ಪತ್ರಿಕೋದ್ಯಮ: ಹರೀಶ್ ಕುಂದರ್ ಉಡುಪಿ.

ಸಂಘ ಸಂಸ್ಥೆಗಳು: ಅಜಪುರ ಕರ್ನಾಟಕ ಸಂಘ ಬ್ರಹ್ಮಾವರ, ಯುವಕ ಮಂಡಲ ಕುತ್ಯಾರು ಕಾಪು, ಛತ್ರಪತಿ ಫೌಂಡೇಷನ್ ಕಾರ್ಕಳ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಕುಂದಾಪುರ ತಾಲೂಕು ಯುವ ಬಂಟರ ಸಂಘ ಕುಂದಾಪುರ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News