ಮರವಂತೆ ಅಂಚೆ ಕಚೇರಿಗೆ ನುಗ್ಗಿ ಕಳವಿಗೆ ಯತ್ನ: ಪ್ರಕರಣ ದಾಖಲು

Update: 2024-08-19 15:00 GMT

ಗಂಗೊಳ್ಳಿ: ಮರವಂತೆಯ ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿದ ಘಟನೆ ಆ.17ರಂದು ಸಂಜೆಯಿಂದ ಆ.19ರ ಬೆಳಗಿನ ಮಧ್ಯಾವಧಿ ಯಲ್ಲಿ ನಡೆದಿದೆ.

ಅಂಚೆ ಕಚೇರಿಯ ಎದುರಿನ ಬಾಗಿಲಿಗೆ ಅಳವಡಿಸಿರುವ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು, ಕಚೇರಿಯಲ್ಲಿದ್ದ ಗೋಡ್ರೆಜ್, ಕಪಾಟು ಗಳನ್ನು ಹುಡುಕಾಡಿ ಕಳ್ಳತನ ಮಾಡಲು ಪ್ರಯತ್ನಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News