ಉಡುಪಿ: ಕರ್ಕಶ ಹಾರ್ನ್ ಮೂಲಕ ಸಾರ್ವಜನಿಕರಿಗೆ ತೊಂದರೆ ಆರೋಪ: ಖಾಸಗಿ ಬಸ್ ವಿರುದ್ಧ ಪ್ರಕರಣ ದಾಖಲು

Update: 2024-06-30 15:11 GMT
ಸಾಂದರ್ಭಿಕ ಚಿತ್ರ 

ಉಡುಪಿ: ಕರ್ಕಶ ಹಾರ್ನ್ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಖಾಸಗಿ ಬಸ್ ವಿರುದ್ಧ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂ.29ರಂದು ಬೆಳಗ್ಗೆ ಜೋಡುಕಟ್ಟೆಯ ಬಳಿ ಗಣೇಶ್ ಎಂಬ ಹೆಸರಿನ ಬಸ್ಸಿನ ಚಾಲಕ ಮುಹಮ್ಮದ್ ಹಸನ್ ಹಾರ್ನ್‌ನಿಂದ ಕರ್ಕಶವಾದ ಶಬ್ಧವನ್ನು ಹೊರಹೊಮ್ಮಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದಾಎರೆಂದು ಆರೋಪಿಸಲಾಗಿದ್ದು, ಈ ಹಿನ್ನೆಲೆ ಯಲ್ಲಿ ಉಡುಪಿ ಸಂಚಾರ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News