ಕೋಮು ಬಣ್ಣ ಷಡ್ಯಂತ್ರ ಖಂಡನೀಯ: ಎಸ್‌ಐಓ

Update: 2023-07-27 16:03 GMT

ಉಡುಪಿ, ಜು.27: ಉಡುಪಿಯ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ರಾಜಕೀಯಕ್ಕೆ ಎಳೆದು ತಂದು ಅದಕ್ಕೆ ಕೋಮು ಬಣ್ಣ ಬೆಳೆದು ಕೋಮು ಧೃವೀಕರಣದ ರಾಜಕೀಯ ಮಾಡಲು ಹವಣಿಸುತ್ತಿರುವ ರಾಜಕೀಯ ಪಕ್ಷದ ಮತ್ತು ಕೋಮುವಾದಿ ಸಂಘಟನೆಗಳ ನಡೆ ಖಂಡನೀಯ ಎಂದು ಎಸ್‌ಐಓ ಉಡುಪಿ ಜಿಲ್ಲೆ ತಿಳಿಸಿದೆ.

ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯರ ಹುಡುಗಾಟಿಕೆಯ ಕೃತ್ಯವು ವಿಷಾದನೀಯ ಮತ್ತು ಇದು ಅತ್ಯಂತ ಬೇಜವಾಬ್ದಾರಿ ಯುತ ವರ್ತನೆಯಾಗಿದೆ. ಈ ಪ್ರಕರಣದ ಮೇಲ್ವಿಚಾರಣೆಗಾಗಿ ಬಂದಿರುವ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಹಾಗೂ ಬಿಜೆಪಿ ನಾಯಕಿ ಖುಷ್ಬು ಅವರು ಸಹ ಈ ಪ್ರಕರಣಕ್ಕೆ ಕೋಮು ಬಣ್ಣ ಬಳೆಯಬೇಡಿ ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ಎಸ್‌ಐಓ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News