ಸಾರ್ವಜನಿಕರ ಶಾಂತಿಭಂಗ: ಐವರು ವಶಕ್ಕೆ

Update: 2023-07-24 14:55 GMT

ಬೈಂದೂರು, ಜು.24: ಶಿರೂರು ಗ್ರಾಮದ ಕೇಸರಕೋಡಿಯ ನ್ಯೂ ಕಾಲನಿ ಎಂಬಲ್ಲಿ ಜು.23ರಂದು ಪರಸ್ಪರ ಗಲಾಟೆ ಮಾಡಿಕೊಂಡು ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದ ಐವರನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಡಾಂಗಿ ಶಾಕೀಬ್, ಜಾಹೀದ್ ತಬ್ಕೆ, ಅಬ್ದುಲ್ ಸರ್ಪರಾಜ್, ಕಾವಾ ಮುದಸೀರ್, ಮಹಮ್ಮದ್ ಫಹಾದ್ ಎಂಬವರು ಕೈಯಿಂದ ದೂಡಿಕೊಂಡು ಗಲಾಟೆ ಮಾಡುವ ಮೂಲಕ ಸಾರ್ವಜನಿಕರ ಶಾಂತಿಗೆ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಇವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News