ಕುಂದಾಪುರ | ಮೆಣಸು ವ್ಯಾಪಾರಿಯ ವಾಹನದಲ್ಲಿದ್ದ 4.5 ಲಕ್ಷ ರೂ. ಕಳವು

Update: 2024-05-23 06:05 GMT

ಕುಂದಾಪುರ, ಮೇ 23: ಒಣ ಮೆಣಸು ವ್ಯಾಪಾರಿಯ ವಾಹನದಿಂದ 4.5 ಲಕ್ಷ ರೂ. ಕಳವುಗೈದ ಘಟನೆ ಸಿದ್ದಾಪುರ ಪೇಟೆಯಲ್ಲಿ ನಡೆದಿರುವುದು ವರದಿಯಾಗಿದೆ.

ಹಾವೇರಿ ಮೂಲದ ಮುಹಮ್ಮದ್ ರಫಿ(43) ಹಣ ಕಳೆದುಕೊಂಡ ವ್ಯಾಪಾರಿ. ಇವರು ಬ್ರಹ್ಮಾವರದ ಸಂತೆಯಲ್ಲಿ ಒಣ ಮೆಣಸು ವ್ಯಾಪಾರ ಮುಗಿಸಿ ತನ್ನ ಕೆಲಸದವರೊಂದಿಗೆ ವಾಹನದಲ್ಲಿ ವಾಪಸ್ ಊರಿಗೆ ಹೊರಟಿದ್ದರು. ದಾರಿಮಧ್ಯೆ ರಾತ್ರಿ ಊಟ ಮಾಡುವ ಸಲುವಾಗಿ ಸಿದ್ದಾಪುರ ಪೇಟೆಯಲ್ಲಿನ ಹೋಟೆಲ್ವೊಂದರ ಬಳಿ ವಾಹನವನ್ನು ನಿಲ್ಲಿಸಿ ತೆರಳಿದ್ದರು. ಈ ವೇಳೆ ಇಬ್ಬರು ಅಪರಿಚಿತರು ವಾಹನದ ಹಿಂದುಗಡೆ ಇರಿಸಿದ್ದ 4,50,000 ರೂ.ವನ್ನು ಕಳವುಗೈದು ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು  https://whatsapp.com/channel/0029VaA8ju86LwHn9OQpEq28  ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News