ಅಸಹಾಯಕ ಸ್ಥಿತಿಯಲ್ಲಿದ್ದ ಮುಂಬೈ ಮೂಲದ ಮಹಿಳೆ ರಕ್ಷಣೆ

Update: 2023-10-08 12:42 GMT

ಉಡುಪಿ, ಅ.8: ಕಳೆದ ಮೂರು ದಿನಗಳಿಂದ ಅನ್ನ ಆಹಾರವಿಲ್ಲದೆ ಶನಿವಾರ ಇಂದ್ರಾಳಿಯ ರೈಲ್ವೆ ಸೇತುವೆ ಸಮೀಪ ಅಸ ಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಮಹಿಳೆಯನ್ನು ನಾಗರಿಕ ಸಮಿತಿಯ ಕಾರ್ಯಕರ್ತ ನಿತ್ಯಾನಂದ ಒಳಕಾಡು ಶನಿವಾರ ರಕ್ಷಿಸಿದ್ದಾರೆ.

ಮಹಿಳೆ ಮುಂಬೈ ಥಾಣೆ ಮೂಲದ ಬೇಗಂ ಎಂದು ತಿಳಿದುಬಂದಿದೆ. ರಕ್ಷಿಸಲ್ಪಟ್ಟ ಮಹಿಳೆಗೆ ಪರ್ನವಸತಿ ಕಲ್ಪಿಸಲು ನಿಟ್ಟೂ ರಿನ ಸಖಿ ಒನ್ ಸ್ಟಾಪ್ ಸೆಂಟರಿಗೆ ದಾಖಲಿಸಲು ಪ್ರಯತ್ನಿಸಲಾಯಿತು. ಆದರೆ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿರು ವುದರಿಂದ ಸಾಂತ್ವನ ಕೇಂದ್ರದ ಸಹಕಾರದೊಂದಿಗೆ ಚಿಕಿತ್ಸೆಗಾಗಿ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆ ದಾಖಲಿಸಲಾಯಿತು.

ರಕ್ಷಣಾ ಕಾರ್ಯದಚರಣೆಯಲ್ಲಿ ಮಹಿಳಾ ಸಹಾಯವಾಣಿ ಕೇಂದ್ರದ ಸಮಾಲೋಚಕಿ ಪೂರ್ಣಿಮಾ, ಸಾಮಾಜಿಕ ಕಾರ್ಯಕರ್ತೆ ಸುಮತಿ, 112 ಗಸ್ತು ಪೊಲೀಸ್ ಅಧಿಕಾರಿ, ವಿದ್ಯಾರ್ಥಿಗಳಾದ ನಿಖಿತಾ, ಅಶ್ವಿತ ಭಾಗಿಯಾಗಿದ್ದರು. ಮೀನ ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News