ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಕೇರಳದ ವ್ಯಕ್ತಿ ನಾಪತ್ತೆ

Update: 2024-09-23 15:42 GMT

ಉಡುಪಿ, ಸೆ.23: ಕೃಷ್ಣ ಮಠಕ್ಕೆ ಆಗಮಿಸಿದ ಕೇರಳ ಮೂಲದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಸೆ.22ರಂದು ರಾತ್ರಿ ವೇಳೆ ನಡೆದಿದೆ.

ನಾಪತ್ತೆಯಾದವರನ್ನು ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಐರಿಂಜಲಕುಡ ನಿವಾಸಿ ಜಯಿವಿಜಯನ್(65) ಎಂದು ಗುರುತಿಸಲಾಗಿದೆ.

ಒಟ್ಟು 33 ಮಂದಿ ಕರ್ನಾಟಕ ರಾಜ್ಯದಲ್ಲಿರುವ ದೇವಾಸ್ಥಾನಗಳಿಗೆ ಭೇಟಿ ನೀಡಲು ಸೆ.20ರಂದು ಕೇರಳದಿಂದ ಹೊರಟಿದ್ದು, ಕೊಲ್ಲೂರು, ಮುರುಡೇಶ್ವರ ದೇವಾಸ್ಥಾನಕ್ಕೆ ತೆರಳಿ ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿದ್ದರು. ಮಠದಲ್ಲಿ ರಾತ್ರಿ ಊಟ ಮಾಡಿ ಹೊರಗಡೆ ಬಂದಿದ್ದು, ಆ ವೇಳೆ ತಂಡದಲ್ಲಿದ್ದ ಜಯವಿಜಯನ್ ನಾಪತ್ತೆ ಯಾಗಿರುವುದು ಕಂಡುಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News