ಕುಂದಾಪುರ ತಾಲೂಕು: ನಿರ್ದೇಶಕರ ಚುನಾವಣಾ ವೇಳಾಪಟ್ಟಿ ಪ್ರಕಟ

Update: 2024-10-08 14:42 GMT

ಉಡುಪಿ, ಅ.8: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕುಂದಾಪುರ ತಾಲೂಕಿಗೆ ಸಂಬಂಧಿಸಿದಂತೆ 2024-2029ನೇ ಅವಧಿಗೆ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಸ್ಪರ್ಧಿಸ ಬಯಸುವ ಕುಂದಾಪುರ ತಾಲೂಕಿನ ಸರಕಾರಿ ನೌಕರರು ತಮ್ಮ ನಾಮಪತ್ರ ಗಳನ್ನು ಅ.9ರಿಂದ 18ರವರೆಗೆ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಚುನಾವಣಾಧಿಕಾರಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಶಾಖೆ, ಕುಂದಾಪುರ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ನಾಮಪತ್ರ ಗಳನ್ನು ಸಲ್ಲಿಸಬಹುದಾಗಿದೆ.

ನಾಮಪತ್ರಗಳ ಪರಿಶೀಲನೆ ಹಾಗೂ ಅರ್ಹ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ದಿನಾಂಕ ಅ. 19, ಉಮೇದುವಾರಿಕೆ ಯನ್ನು ಹಿಂಪಡೆಯಲು ಅ.21 ಕೊನೆಯ ದಿನವಾಗಿದೆ. ಚುನಾವಣೆ ಅ.28ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಸಂಘದ ಸಭಾಭವನ ಮತ್ತು ಕಾರ್ಯಾಲಯದಲ್ಲಿ ಹಾಗೂ ಮತಗಳ ಎಣಿಕೆಯು ಮತದಾನದ ಮುಕ್ತಾಯದ ನಂತರ ನಡೆಯಲಿದೆ ಎಂದು ಕುಂದಾಪುರ ಶಾಖೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News