ಬಸ್ಸಿನಲ್ಲಿ ಮಹಿಳೆಯ ಚಿನ್ನಾಭರಣ ಕಳವು: ಪ್ರಕರಣ ದಾಖಲು

Update: 2024-10-08 15:32 GMT

ಕಾಪು, ಅ.8: ಬೆಂಗಳೂರಿನಿಂದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಬಗ್ಗೆ ವರದಿಯಾಗಿದೆ.

ಕೊಪ್ಪಲಂಗಡಿಯ ಅಮೂಲ್ಯ ಸುಕೇಶ(34) ಎಂಬವರು ಬೆಂಗಳೂರಿನಿಂದ ಅ.5ರಂದು ರಾತ್ರಿ ವೇಳೆ ಊರಿಗೆ ಬರಲೆಂದು ಬಸ್‌ನಲ್ಲಿ ಹೊರಟಿದ್ದು, ಅವರ ಬ್ಯಾಗ್‌ನಲ್ಲಿ ಚಿನ್ನದ ಕರಿಮಣಿ ಸರ, ಎರಡು ಚಿನ್ನದ ಬಳೆಗಳು, ಚಿನ್ನದ ಸರ, ಎರಡು ಚಿನ್ನದ ಪೆಂಡೆಂಟ್‌ಗಳಿದ್ದವು. ಬಸ್ಸಿನಲ್ಲಿ ಆಭರಣಗಳಿದ್ದ ಬ್ಯಾಗನ್ನು ಅವರ ಕಾಲುಗಳ ಮಧ್ಯೆ ಇಟ್ಟು ಮಲಗಿದ್ದರು. ಈ ವೇಳೆ ಕಳ್ಳರು ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆಂದು ದೂರಲಾಗಿದೆ.

ಅ.6ರಂದು ಬೆಳಗ್ಗೆ ಮನೆಗೆ ಬಂದು ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ತೆಗೆಯಲು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 4.81ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News