ಚಂದ್ರನಗರ: ಉಚಿತ ಮುಂಜಿ ಕಾರ್ಯಕ್ರಮ

Update: 2024-10-13 04:28 GMT

ಕುಂದಾಪುರ: ನಮ್ಮ ನಾಡ ಒಕ್ಕೂಟ(ರಿ) ಕಾಪು ತಾಲೂಕು ಹಾಗೂ ಸಫಿಯ ಉಮರಬ್ಬ ಫ್ಯಾಮಿಲಿ ಗ್ರೂಪ್, ಚಂದ್ರನಗರ ಇವರ ಜಂಟಿ ಆಶ್ರಯದಲ್ಲಿ ಮರ್ಹೂಂ ಹಾಜಿ ಕೆ.ಉಮರಬ್ಬರ ಸ್ಮರಣಾರ್ಥ 27 ಮಕ್ಕಳಿಗೆ ಉಚಿತ ಮುಂಜಿ(ಸುನ್ನತ್) ಕಾರ್ಯಕ್ರಮ ಚಂದ್ರನಗರ ಬಟರ್ ಫ್ಲೈ ಪಾರ್ಟಿ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.

ಮಲ್ಲಾರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುರ್ರಶೀದ್ ಸಖಾಫಿ ಅಲ್ ಖಾಮಿಲ್ ದುಆಗೈದರು.

ಉದ್ಘಾಟನೆಯನ್ನು ಸಫಿಯ ಉಮರಬ್ಬ ಫ್ಯಾಮಿಲಿ ಗ್ರೂಪ್ ಅಧ್ಯಕ್ಷ ಡಾ.ಎಂ.ಫಾರೂಕ್ ಉಮರಬ್ಬ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಕಾಪು ತಾಲೂಕು ಘಟಕದ ಅಧ್ಯಕ್ಷ ಅಶ್ರಫ್ ಪಡುಬಿದ್ರೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಕ್, ಎನ್.ಎನ್.ಒ. ಘಟಕದ ಜಿಲ್ಲಾ ಉಪಾಧ್ಯಕ್ಷ, ಕಾಪು ತಾಲೂಕು ಉಸ್ತುವಾರಿ ಯು.ಎ ರಶೀದ್, ಸೌದಿ ಅರಬಿಯಾ ಅನಿವಾಸಿ ಭಾರತೀಯ ಉದ್ಯಮಿ ಮುಹಮ್ಮದ್ ಇಲ್ಯಾಸ್ ಹಮೀದ್, ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಜಿಲ್ಲಾಧ್ಯಕ್ಷ ಎಂ.ಎಚ್.ಹಾಜಿ ಮೊಯ್ದಿನ್ ಅಡ್ಡೂರು, ಎನ್.ಎನ್.ಒ. ಪರ್ಯಾವರಣ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಕ್ ವಹೀದ್ ದಾವೂದ್, ಎನ್.ಎನ್.ಒ. ಕೇಂದ್ರ ಸಮಿತಿಯ ಕೋಶಾಧಿಕಾರಿ ಪೀರ್ ಮುಹಮ್ಮದ್, ಜಮೀಯ್ಯತುಲ್ ಫಲಾಹ್ ಕಾಪು ತಾಲೂಕು ಅಧ್ಯಕ್ಷ ಶಬೀ ಅಹ್ಮದ್ ಖಾಝಿ, ಡಾ.ಸಿದ್ದೀಕ್ ಅಡ್ಡೂರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಅಬ್ದುಲ್ ಹಮೀದ್ ಯೂಸುಫ್ ಮೂಳೂರು ಕಾರ್ಯಕ್ರಮ ನಿರೂಪಿಸಿದರು. ಎಸ್.ಎ.ಅಬ್ದುರ್ರಝಾಕ್ (ಕೊಪ್ಪ) ಚಂದ್ರನಗರ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News