ಪಡುಬಿದ್ರಿ: ಅಂಗಡಿಗೆ ನುಗ್ಗಿ ನಗದು ಲೂಟಿ: ಪ್ರಕರಣ ದಾಖಲು

Update: 2024-10-12 16:57 GMT

ಪಡುಬಿದ್ರಿ, ಅ.12: ಯಾರೋ ಕಳ್ಳರು ಹೆಜಮಾಡಿ ಗ್ರಾಮದ ಮಲ್ಯರ ಮಠದ ಅಂಗಡಿಯೊಂದಕ್ಕೆ ಗುರುವಾರ ರಾತ್ರಿ ನುಗ್ಗಿ ಅಂಗಡಿಯಲ್ಲಿಟ್ಟಿದ್ದ 1.10ಲಕ್ಷ ರೂ.ನಗದನ್ನು ಲೂಟಿ ಮಾಡಿದ್ದಾರೆ ಎಂದು ಅಂಗಡಿಯ ಮಾಲಿಕ ಲಕ್ಷಿಕಾಂತ್ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಲಕ್ಷ್ಮೀಕಾಂತ್ ಅವ ಮಲ್ಯರ ಮಠದಲ್ಲಿ ಶ್ರೀಕೃಷ್ಣ ಸ್ಟೋರ್ ಎಂಬ ಹೆಸರಿನ ಗಿರಣಿ ಹಾಗೂ ತರಕಾರಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತಿದ್ದು, ಅ.10ರಂದು ದಿನದ ವ್ಯಾಪಾರದಲ್ಲಿ ಸಂಗ್ರಹವಾದ ಹಣ 1.10ಲಕ್ಷ ರೂ.ವನ್ನು ಅಂಗಡಿಯ ಒಳಗೆ ಡ್ರಾವರ್‌ನ ಕೆಳಗಿನ ರೆಗ್ಸಿನ್ ಬ್ಯಾಗ್‌ನಲ್ಲಿ ಹಾಕಿಟ್ಟು ಅಂಗಡಿಗೆ ಬೀಗ ಹಾಕಿ ರಾತ್ರಿ 9ಗಂಟೆಗೆ ಮನೆಗೆ ತೆರಳಿದ್ದರು.

ಅ.11ರ ಶುಕ್ರವಾರ ಬೆಳಗ್ಗೆ 8ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿಗೆ ಹಾಕಿದ ಬೀಗವನ್ನು ಯಾರೋ ಒಡೆದು ಬ್ಯಾಗಿನಲ್ಲಿಟ್ಟಿದ್ದ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News