ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು
Update: 2024-10-24 16:30 GMT
ಬೈಂದೂರು, ಅ.24: ಕೃಷಿ ಕೆಲಸಕ್ಕೆಂದು ಹೋದ ಕಾಲ್ತೋಡು ಗ್ರಾಮದ ಚಂದ್ರ (45) ಎಂಬವರು ಹುಂತನಹೊಳೆ ಎಂಬಲ್ಲಿ ಹೊಳೆ ಬದಿಯ ಅಂಚಿನಲ್ಲಿ ನಡೆದುಕೊಂಡು ಹೋಗುವಾಗ ಅಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅ.23ರ ಬುಧವಾರ ಬೆಳಗ್ಗೆ 10:30ರ ಸುಮಾರಿಗೆ ನಡೆದಿದೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.