ಹೊಳೆಗೆ ಬಿದ್ದು ವೃದ್ಧೆ ಮೃತ್ಯು

Update: 2025-04-03 22:03 IST
ಹೊಳೆಗೆ ಬಿದ್ದು ವೃದ್ಧೆ ಮೃತ್ಯು
  • whatsapp icon

ಗಂಗೊಳ್ಳಿ, ಎ.3: ಮೇಯಲು ಬಿಟ್ಟ ದನವನ್ನು ಮನೆಗೆ ತರಲು ಹೋದ ವೃದ್ಧೆಯೊಬ್ಬರು ಹೊಳೆ ದಡದ ಬಳಿ ನಡೆದುಕೊಂಡು ಬರುವಾಗ ಅಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರ ತಾಲೂಕು ನೂಜಾಡಿ ಗ್ರಾಮದ ಮೂಡಣಗದ್ದೆ ಎಂಬಲ್ಲಿಂದ ವರದಿಯಾಗಿದೆ.

ಮೃತರನ್ನು ನೂಜಾಡಿ ಗ್ರಾಮದ ಮೂಕಾಂಬು (61) ಎಂದು ಗುರುತಿಸಲಾಗಿದೆ. ಇವರು ಬುಧವಾರ ಅಪರಾಹ್ನ ಮೇಯಲು ಬಿಟ್ಟ ದನವನ್ನು ಮನೆಗೆ ತರಲು ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News