ಯುವಕ ನಾಪತ್ತೆ

Update: 2023-10-13 14:42 GMT

ಬೈಂದೂರು, ಅ.13: ನಾವುಂದ ಗಣೇಶ ನಗರ ನಿವಾಸಿ ಪ್ರತಾಪ(18) ಎಂಬವರು ಅ.9ರಂದು ಬೋಟಿನ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಇವರನ್ನು ಗೋವಾದ ಮಡ್ಗಾವ್ ರೈಲ್ವೆ ನಿಲ್ದಾಣದಲ್ಲಿ ನಾವುಂದದ ಅಬ್ದುಲ್ ಎಂಬವರು ನೋಡಿ ವಿಚಾರಿಸಿದ್ದರೆನ್ನಲಾಗಿದೆ. ನಂತರ ಆತನ ಮೊಬೈಲ್ ಸ್ವೀಚ್ ಆಫ್ ಆಗಿರುವುದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News