ಉಡುಪಿ: ಸಮಾಜ ಸೇವಕ ಇಕ್ಬಾಲ್ ಮನ್ನಾಗೆ ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿ

Update: 2024-09-26 13:42 GMT

ಇಕ್ಬಾಲ್ ಮನ್ನಾ

ಉಡುಪಿ: ಗಲ್ಫ್ ದೇಶದಲ್ಲಿ ಕನ್ನಡ ಮತ್ತು ತುಳು ಭಾಷೆಗಾಗಿ ಅವಿರತ ಶ್ರಮಿಸಿದ್ದ ಸಮಾಜ ಸೇವಕ, ಉಡುಪಿ ಬ್ರಹ್ಮಗಿರಿಯ ಇಕ್ಬಾಲ್ ಮನ್ನಾ, ವಿಶ್ವ ಮಾನವ ಹಕ್ಕುಗಳ ಪೀಪಲ್ಸ್ ಕೌನ್ಸಿಲ್ ನೀಡುವ ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಖತರ್‌ನಲ್ಲಿ ಸಾಮಾಜಿಕ ಮತ್ತು ದತ್ತಿ ಚಟುವಟಿಕೆಗಳಿಂದ ಗುರುತಿಸಲ್ಪಟ್ಟ ಇವರು, ಖತರ್‌ ತುಳು ಕೂಟದ ಸ್ಥಾಪಕ ಸದಸ್ಯ, ಮತ್ತು ಕೆಎಂಸಿಎ ಖತರ್‌ ಸ್ಥಾಪಕ ಸದಸ್ಯರಾಗಿದ್ದರು. ಸ್ವದೇಶಕ್ಕೆ ಮರಳಿದ ಬಳಿಕ ಹಲವು ಸಾಮಾಜಿಕ ಸಂಘಟನೆಗಳಲ್ಲಿ ತನ್ನನ್ನು ತಾವು ತೊಡಗಿಸಿಕೊಂಡಿದ್ದ ಇವರು, ಉಡುಪಿಯ ಜೈಂಟ್ಸ್ ಗ್ರೂಪ್, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್, ಸಾಹೇಬನ್ ವೆಲ್ಫೇರ್ ಟ್ರಸ್ಟ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್, ಬ್ರಹ್ಮಗಿರಿ ನಾಯಕರೆಯ ಹಾಶಿಮಿ ಮಸೀದಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ, ಇತ್ಯಾದಿ ಸಂಘಟನೆಗಳಲ್ಲಿ ಪದಾಧಿಕಾರಿ ಗಳಾಗಿ ಕಾರ್ಯನಿರ್ವಹಿಸಿದ್ದರು.

ಸೆ.28ರಂದು ಸಂಜೆ 5.30ಕ್ಕೆ ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News