ಬಂಟ್ವಾಳ: ಅಂಗನವಾಡಿಗೆ ನುಗ್ಗಿ ಕುಕ್ಕರ್ ಸಹಿತ ನಗದು‌ ಕಳವು

Update: 2023-11-09 16:32 GMT

ಬಂಟ್ವಾಳ: ಪಾಣೆಮಂಗಳೂರು ಸಮೀಪದ ಬೊಂಡಾಲ-ಶಾಂತಿಗುಡ್ಡೆ ಅಂಗನವಾಡಿಗೆ ನುಗ್ಗಿದ ಕಳ್ಳರು ಅಲ್ಯುಮಿನಿಯಂ ಕುಕ್ಕರುಗಳ ಸಹಿತ ನಗದು ಹಣ ಲಪಟಾಯಿಸಿದ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಅಂಗನವಾಡಿ ಕಾರ್ಯಕರ್ತೆ ದೇವಕಿ ಅವರು ಬುಧವಾರ ಮೀಟಿಂಗಿಗೆ ತೆರಳಿದ್ದು, ಸಹಾಯಕಿ ವಿಜಯಶ್ರೀ ಅವರು ಬುಧವಾರ ಸಂಜೆ ಅಂಗನವಾಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಗುರುವಾರ ಬೆಳಿಗ್ಗೆ ಅಂಗನವಾಡಿ ಸಹಾಯಕಿ ವಿಜಯಶ್ರೀ ಅಂಗನವಾಡಿಗೆ ಬಂದಾಗ ಅಂಗನವಾಡಿಯ ಬೀಗ ಮುರಿದು ಬೀಗ ತೆರೆದಿತ್ತು. ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ  ಸುಮಾರು ಎರಡೂವರೆ ಸಾವಿರ ರೂಪಾಯಿ ಮೌಲ್ಯದ 10 ಲೀಟರ್ ಹಾಗೂ 5 ಲೀಟರಿನ ಎರಡು ಅಲ್ಯುಮಿನಿಯಂ ಕುಕ್ಕರುಗಳು, 3 ಸಾವಿರ ರೂಪಾಯಿ ಮೌಲ್ಯದ 2 ಅಲ್ಯುಮಿನಿಯಂ ಡಬ್ಬ ಹಾಗೂ ಮುಚ್ಚಳ, 1 ಸಾವಿರ ರೂಪಾಯಿ ನಗದು ಹಣ ಹಾಗೂ ಅಂಗನವಾಡಿಯಲ್ಲಿದ್ದ ದಿನಸಿ ಸಾಮಗ್ರಿಗಳನ್ನು ಕಳವುಗೈದಿರುವುದು ಕಂಡು ಬಂದಿದೆ.

ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ದೇವಕಿ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News