ಸೆ.15ರಿಂದ ಭಾರತೀಯ ಯುವ ಸಂಸತ್ ರಾಷ್ಟ್ರೀಯ ಅಧಿವೇಶನ: ಮುಖ್ಯ ಅತಿಥಿಯಾಗಿ ಸ್ಪೀಕರ್ ಯು.ಟಿ.ಖಾದರ್ ಭಾಗಿ

Update: 2024-09-14 17:44 GMT

ಯು.ಟಿ.ಖಾದರ್

ಮಂಗಳೂರು, ಸೆ.14: ಭಾರತೀಯ ಯುವ ಸಂಸತ್ ನ 27ನೇ ರಾಷ್ಟ್ರೀಯ ಅಧಿವೇಶನ ರಾಜಸ್ಥಾನದ ಜೈಪುರದಲ್ಲಿ ಸೆ.15ರಿಂದ 17ರ ತನಕ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ.

ಪ್ರತಿ ಅಧಿವೇಶನದಲ್ಲೂ ಆತಿಥೇಯ ರಾಜ್ಯವನ್ನು ಹೊರತುಪಡಿಸಿ ದೇಶದ ಬೇರೆ ರಾಜ್ಯಗಳ ವಿಧಾನಸಭೆಗಳ ಓರ್ವ ಸ್ಪೀಕರ್ ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಅದರಂತೆ ಈ ಬಾರಿ ಯು.ಟಿ. ಖಾದರ್‌ರನ್ನು ಆಹ್ವಾನಿಸಲಾಗಿದ್ದು, ಸೆ.15ರಂದು ನಡೆಯಲಿರುವ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ಮೀಡಿಯಾ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿರುವ ಅಧಿವೇಶನದ ಉದ್ಘಾಟನೆಯ ಬಳಿಕ ಯು.ಟಿ.ಖಾದರ್ ರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.

ಆತಿಥೇಯ ರಾಜಸ್ಥಾನದ ಗವರ್ನರ್ ಹರಿಭಾವು ಕಿಶನ್‌ರಾವ್ ಬಾಗ್ಡೆ, ರಾಜಸ್ಥಾನ ವಿಧಾನಸಭೆ ಸ್ಪೀಕರ್ ವಾಸುದೇವ್ ದೇವ್ನಾನಿ, ಐವೈಪಿಯ ರಾಷ್ಟ್ರೀಯ ಸಂಚಾಲಕ ಅಶುತೋಷ್ ಜೋಶ್, ಮೀಡಿಯಾ ಫೌಂಡೇಶನ್‌ನ ಪ್ರತಿನಿಧಿಗಳು, ಯುವ ಸಂಸದರು ಭಾಗವಹಿಸಲಿದ್ದಾರೆ. ಕರ್ನಾಟಕದಿಂದ 11 ಯುವಕರು ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News