ಉಪ್ಪಿನಂಗಡಿ | ದರೆ ಕುಸಿತ: ಮನೆ, ತೋಟ ಅಪಾಯದಲ್ಲಿ

Update: 2024-08-05 07:42 GMT

ಉಪ್ಪಿನಂಗಡಿ: ನಿರಂತರ ಮಳೆಯಿಂದಾಗಿ 34 ನೆಕ್ಕಿಲಾಡಿ ಗ್ರಾಮದ ತಾಳೆಹಿತ್ಲು ಎಂಬಲ್ಲಿ ದರೆ ಕುಸಿಯುತ್ತಿದ್ದು, ಜನಾರ್ದನ ನಾಯ್ಕ ಮತ್ತು ದಿ.ಲಿಂಗಪ್ಪ ನಾಯ್ಕ ಎಂಬವರ ಮನೆ ಹಾಗೂ ಅಡಿಕೆ ತೋಟ ಅಪಾಯಕ್ಕೆ ಸಿಲುಕುವ ಆತಂಕ ಎದುರಾಗಿದೆ. ಖಾಸಗಿ ವ್ಯಕ್ತಿಯೋರ್ವರ ಮನೆಗೆ ಹೋಗುವ ದಾರಿಯ ಮೇಲೂ ಮಣ್ಣು ಬಿದ್ದಿದೆ.

ಈಗಾಗಲೇ ಸುಮಾರು 100 ಮೀಟರ್ ನಷ್ಟು ಉದ್ದಕ್ಕೆ ದರೆ ಕುಸಿದಿದ್ದು, ಈ ದರೆಯ ಮೇಲ್ಭಾಗದಲ್ಲಿ ಅಡಿಕೆ ತೋಟ, ಮನೆಗಳಿವೆ. ದರೆ ಕುಸಿಯುತ್ತಲೇ ಇದ್ದು, ಇನ್ನಷ್ಟು ಕುಸಿದರೆ ಅಡಿಕೆ ತೋಟ ಹಾಗೂ ಮನೆಗಳು ಅಪಾಯಕ್ಕೆ ಸಿಲುಕಲಿವೆ. ಆದ್ದರಿಂದ ಸಂಬಂಧಿತ ಇಲಾಖೆಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News