ಮಂಗಳೂರು: ಡ್ರಗ್ಸ್, ಗಾಂಜಾ ಸೇವನೆ ಆರೋಪ; ನಾಲ್ವರ ಸೆರೆ
Update: 2023-12-01 15:16 GMT
ಮಂಗಳೂರು, ಡಿ.1: ನಗರದ ಕೆಲವು ಕಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ಡ್ರಗ್ಸ್ ಸೇವನೆ ಮಾಡುತ್ತಿದ್ದ ಆರೋಪ ದಲ್ಲಿ ನಾಲ್ಕು ಮಂದಿಯನ್ನು ಗುರುವಾರ ಬಂಧಿಸಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ತಿರುವೈಲು ಗ್ರಾಮದ ಕೆತ್ತಿಕಲ್ಲಿನಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದ ಆರೋಪದಲ್ಲಿ ತಿರುವೈಲಿನ ಚರಣ್ ರಾಜ್(28) ಮತ್ತು ಉಳಾಯಿಬೆಟ್ಟು ಜಂಕ್ಷನ್ನಲ್ಲಿ ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇರೆಗೆ ಬಂಟ್ವಾಳ ಅಮ್ಟಾಡಿಯ ಕಾರ್ತಿಕ್ (27) ಎಂಬವರನ್ನು ಬಂಧಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿಸಲಾದ ಆ್ಯಂಟಿ ಡ್ರಗ್ ಟೀಮ್ನ ಪೊಲೀಸರು ನ.30ರಂದು ಸಂಜೆ ಉತ್ತರ ದಕ್ಕೆಯ ಬಳಿ ಗಾಂಜಾ ಸೇವನೆ ಮಾಡಿದ್ದ ಆರೋಪದ ಮೇರೆಗೆ ಕಸ್ಬಾ ಬೆಂಗ್ರೆಯ ನೌಷಾದ್ (19) ಮತ್ತು ಪಂಪ್ವೆಲ್ ಬಳಿ ಗಾಂಜಾ ಸೇವನೆ ಮಾಡಿದ್ದ ಆರೋಪದಲ್ಲಿ ಕೃಷ್ಣಪಾರದ ಅಬ್ದುಲ್ ಖಾದರ್(25) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.