ಮಂಗಳೂರು: ಮಾದಕ ವಸ್ತು ಸೇವನೆ ಆರೋಪ; 6 ಮಂದಿ ಸೆರೆ

Update: 2023-12-04 14:31 GMT

ಮಂಗಳೂರು: ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ 6 ಮಂದಿ ಆರೋಪಿಗಳನ್ನು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಿ.2ರಂದು ನಗರದ ಜೈಲು ರಸ್ತೆಯ ಬಳಿ ಅಮಲಿನಲ್ಲಿದ್ದಂತೆ ಕಂಡು ಬಂದ ಮುರುಡೇಶ್ವರದ ಶಶಾಂಕ್ ಜೈವಂತ್ (21)ನನ್ನು ವಿಚಾರಿಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅದಲ್ಲದೆ ಅಂದು ಸಂಜೆ 7:45ಕ್ಕೆ ಬಲ್ಮಠ ಗ್ರೌಂಡ್ ಬಳಿ ಡ್ರಗ್ಸ್ ಸೇವಿಸಿದ್ದ ಸುಂಕದಕಟ್ಟೆಯ ದೀಕ್ಷಿತ್(27) ಮತ್ತು ಅಶೋಕ ನಗರದ ಭೀಮಣ್ಣ ಗೋಗಿ(24), ಅಂದು ರಾತ್ರಿ 8ಕ್ಕೆ ಎಸ್‌ಡಿಎಂ ಕಾಲೇಜು ಬಳಿ ಡ್ರಗ್ಸ್ ಸೇವನೆ ಮಾಡಿದ್ದ ಅಳಕೆಯ ಸೂರ್ಯಪ್ರತಾಪ್ ಸಿಂಗ್(21), ರಾತ್ರಿ 8:30ಕ್ಕೆ ಕರಾವಳಿ ಮೈದಾನದ ಬಳಿ ಡ್ರಗ್ಸ್ ಸೇವಿಸಿದ್ದ ಬಾಗಲಕೋಟೆಯ ಯಮನೂರ್(22) ಮತ್ತು ನಂದನ್(20) ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News