ಮಂಗಳೂರು| ಕಂಟೈನರ್ ಢಿಕ್ಕಿ: ದ್ವಿಚಕ್ರ ವಾಹನ ಸಹಸವಾರೆ ಸ್ಥಳದಲ್ಲೇ ಮೃತ್ಯು

Update: 2024-09-17 15:39 GMT

ಮಂಗಳೂರು: ನಗರದ ಕೂಳೂರು ಬಳಿ ಸ್ಕೂಟರ್‌ಗೆ ಕಂಟೈನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ಸ್ಕೂಟರ್‌ನಲ್ಲಿದ್ದ ಸಹಸವಾರೆ ಲಾವಣ್ಯ (27) ಎಂಬವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.

ಶಕೀಲ್ ಸುವರ್ಣ ಎಂಬವರು ಪತ್ನಿ ಲಾವಣ್ಯ ಅವರೊಂದಿಗೆ ಪಣಂಬೂರಿನಿಂದ ಕಾವೂರು ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿ ದ್ದಾಗ ಕೂಳೂರು ನದಿ ಸೇತುವೆಯಲ್ಲಿ ಅವರ ಸ್ಕೂಟರ್‌ಗೆ ಪಣಂಬೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಢಿಕ್ಕಿ ಹೊಡೆಯಿತೆನ್ನಲಾಗಿದೆ.

ಇದರಿಂದಾಗಿ ಶಕೀಲ್ ಸುವರ್ಣ ಮತ್ತು ಲಾವಣ್ಯ ಸ್ಕೂಟರ್ ಸಮೇತ ರಸ್ತೆಗೆ ಬಿದಿದ್ದು, ಕಂಟೈನರ್ ಹಿಂಭಾಗದ ಚಕ್ರ ಲಾವಣ್ಯ ಅವರ ತಲೆಯ ಮೇಲೆ ಹರಿದು ಲಾವಣ್ಯ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News