ಮಂಗಳೂರು | ರಂಗಸ್ಥಳದಲ್ಲಿ ಸಾನಿಧ್ಯದ ವಿಶೇಷ ಮಕ್ಕಳ ಯಕ್ಷಗಾನ ಪ್ರದರ್ಶನ
Update: 2025-04-06 14:21 IST

ಮಂಗಳೂರು : ಕಾಸರಗೋಡಿನ ಮದ್ದೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯ ನಿಮಿತ್ತ ಶನಿವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳು ‘ಭಸ್ಮಾಸುರ ಮೋಹಿನಿ’ ಎಂಬ ಯಕ್ಷಗಾನ ಪ್ರದರ್ಶಿಸಿದರು.
ಈವರೆಗೆ ವೇದಿಕೆಗಳಲ್ಲಿ ಮಾತ್ರ ಯಕ್ಷಗಾನ ಪ್ರದರ್ಶಿಸುತ್ತಿದ್ದ ಸಾನಿಧ್ಯದ ಮಕ್ಕಳು ಮೊದಲ ಬಾರಿಗೆ ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.
