ಮುಡಿಪು: ಎರಡು ಕಾರುಗಳು ಮುಖಾಮುಖಿ ಢಿಕ್ಕಿ; ಇಬ್ಬರಿಗೆ ಗಾಯ

Update: 2024-06-10 09:08 GMT

ಬಂಟ್ವಾಳ : ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ಮಹಿಳೆ ಹಾಗೂ ಕಾರು ಚಾಲಕ ಗಾಯಗೊಂಡ ಘಟನೆ ಇರಾ ಗ್ರಾಮದ ಮೋಂತಿಮಾರು ಎಂಬಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

ಗಾಯಾಳು ಮಹಿಳೆಯನ್ನು ನಾಗವೇಣಿ ಹಾಗೂ ಕಾರು ಚಾಲಕ ರವಿರಾಜ ಗಟ್ಟಿ ಎಂದು ಗುರುತಿಸಲಾಗಿದೆ. ಸುಳ್ಯ ನಿವಾಸಿ ಕಿಶನ್ ಕೆ (26) ಎಂಬವರು ತನ್ನ ಕಾರಿನಲ್ಲಿ ತಾಯಿ ನಾಗವೇಣಿ ಅವರೊಂದಿಗೆ ಕುತ್ತಾರು ಕಡೆಗೆ ಮಂಚಿ-ಮುಡಿಪು ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಮುಡಿಪು ಕಡೆಯಿಂದ ಬಂದ ರವಿರಾಜ ಗಟ್ಟಿ ಅವರು ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಗಾಯಾಳು ನಾಗವೇಣಿ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಹಾಗೂ ರವಿರಾಜ ಗಟ್ಟಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News