ಬಂಗ್ಲೆಗುಡ್ಡೆ: ನೂತನ ಮದ್ರಸ ಕಟ್ಟಡ ಉದ್ಘಾಟನೆ

Update: 2023-10-09 15:51 GMT

ಕಾರ್ಕಳ: ಕಾರ್ಕಳ ಮುಸ್ಲಿಂ ಜಮಾತ್ ಸಾಲ್ಮರ ಇದರ ವತಿಯಿಂದ ನಡೆಯುತ್ತಿರುವ ಅಲ್ ಅಯ್ಯೂಬ್ ಮದ್ರಸ ಬಂಗ್ಲೆಗುಡ್ಡೆ ಇದರ ನೂತನ ಮದ್ರಸ ಕಟ್ಟಡವನ್ನು ಅಲ್ ಮಾರಿಫ್ ಮುಖ್ಯಸ್ಥ ಮುಫ್ತಿ ಅಬ್ದುಲ್ ರಹಮಾನ್ ರವರು ಬಂಗ್ಲೆಗುಡ್ಡೆ ನೂರ್ ಮಸೀದಿ ವಠಾರದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾರ್ಕಳ ಮುಸ್ಲಿಂ ಜಮಾತ್ ಸಾಲ್ಮರ ಕಾರ್ಕಳ ಇದರ ಅಧ್ಯಕ್ಷ ರಾದ ಅಶ್ಪಾಕ್ ಅಹಮ್ಮದ್ , ಮೌಲಾನ ಅಬ್ದುಲ್ ಹಫೀಝ್ ಅಲ್ ಖಾಸ್ಮಿ , ಅಲ್ ಅಯ್ಯೂಬ್ ಮದ್ರಸದ ಸದರ್ ಉಸ್ತಾದ್ ಮೌಲಾನ ಅಬ್ದುಲ್ ಖಾದರ್ ಮದನಿ, ಜಾಮೀಯ ಮದೀನತುಲ್ ಉಲೂಮ್ ಪ್ರಾಂಶುಪಾಲ ಮುಫ್ತಿ ಅಬುಶಮ ಅಲ್ ಖಾಸ್ಮಿ, ಕಜೆ ಕಾಶೀಫುಲ್ ಉಲೂಮ್ ಪ್ರಾಂಶುಪಾಲ ಮೌಲಾನ ಮೊಹಮ್ಮದ್ ಉಮ್ಮರ್, ಮೌಲಾನ ಅಶ್ಪಾಕ್ ಸಖಾಪಿ, ನೂರ್ ಮಸೀದಿ ಖತೀಬರಾದ ಮೌಲಾನ ಜಾಫರ್ ಸಾಧಿಕ್, ಮೌಲಾನ ಫಹದ್ , ಮಸ್ಜೀದ್ ಎ ಬಿಲಾಲ್ ಇಮಾಮ್ ಮೌಲಾನ ಹಬೀಬುಲ್ಲಾ, ಕಾರ್ಕಳ ಮುಸ್ಲಿಂ ಜಮಾತ್ ಸಾಲ್ಮರ ಕಾರ್ಕಳ ಇದರ ಕಾರ್ಯದರ್ಶಿ ಶಬ್ಬೀರ್ ಅಹ್ಮದ್, ಕೋಶಾಧಿಕಾರಿ ಅಬ್ದುಲ್ ಖಾಲೀಕ್, ಸದಸ್ಯರಾದ ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ, ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News