ಚಾರ್ಮಾಡಿ ಹಸನಬ್ಬರಿಗೆ ಹ್ಯುಮಾನಿಟಿ ಫೌಂಡೇಶನ್ ನಿಂದ ಸನ್ಮಾನ

Update: 2023-12-04 10:48 GMT

ಮಂಗಳೂರು, ಡಿ.4: ಸಮಾಜ ಸೇವೆಗಾಗಿ ಜೀವನ ಮುಡಿಪಾಗಿಟ್ಟಿರುವ ಚಾರ್ಮಾಡಿ ಹಸನಬ್ಬ ನಮಗೆಲ್ಲ ಆದರ್ಶಪ್ರಾಯ ಎಂದು ಹ್ಯುಮಾನಿಟಿ ಫೌಂಡೇಶನ್ ಅಧ್ಯಕ್ಷ ನಾಸಿರ್ ಅಹ್ಮದ್ ಸಾಮಾಣಿಗೆ ಹೇಳಿದ್ದಾರೆ.

ಅವರು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬರನ್ನು ಹ್ಯುಮಾನಿಟಿ ಫೌಂಡೇಶನ್, ಮಂಗಳೂರು ಇದರ ವತಿಯಿಂದ ಚಾರ್ಮಾಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಹ್ಯುಮಾನಿಟಿ ಫೌಂಡೇಶನ್ ಕೋಶಾಧಿಕಾರಿ ಇಲ್ಯಾಸ್ ಚಾರ್ಮಾಡಿ, ಉಪಾಧ್ಯಕ್ಷ ಆಸಿಫ್, ಕಾರ್ಯದರ್ಶಿ ಸೈಫುಲ್ಲಾ, ಸಂಚಾಲಕ ಸಲೀಂ ಕುತ್ತಾರ್, ಸಿ.ಅದ್ದು ಚಾರ್ಮಾಡಿ, ಹನೀಫ್ ಕುತ್ತಾರ್, ಶಕೀಲ್ ತುಂಬಜಾ, ಸಾಲಿ ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು.

ಪತ್ರಕರ್ತ ಬಶೀರ್ ಕಲ್ಕಟ್ಟ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಹಮೀದ್ ಪಜೀರ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News