ಸೈದಾನಿ ಬೀಬಿ ದರ್ಗಾಕ್ಕೆ ಎಸ್ಪಿ ಯತೀಶ್ ಭೇಟಿ
Update: 2024-10-14 14:47 GMT
ಮಂಗಳೂರು, ಅ.14: ಹಝ್ರತ್ ಸೈದಾನಿ ಬೀಬಿ ದರ್ಗಾಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಎನ್.ಯತೀಶ್ ಇತ್ತೀಚೆಗೆ ಭೇಟಿ ನೀಡಿ, ಪ್ರಾರ್ಥಿಸಿದರು.
ಬಳಿಕ ಎಸ್ಪಿ ಯತೀಶ್ ಅವರನ್ನು ದರ್ಗಾ ಸಮಿತಿಯ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಕಾಸಿಮ್ ಮಲ್ಲಿಗೆ ಮನೆ ಅವರು ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭ ಮ್ಯಾನೇಜರ್ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.