ಸುರತ್ಕಲ್: ಸಮುದ್ರದಲ್ಲಿ ಮುಳುಗಿ ಓರ್ವ ನಾಪತ್ತೆ

Update: 2023-09-17 14:18 GMT

ಸುರತ್ಕಲ್, ಸೆ.17: ಸಮುದ್ರ ವಿಹಾರಕ್ಕೆ ಬಂದ ಮೂವರ ಪೈಕಿ ಓರ್ವ ಸಮುದ್ರಪಾಲಗಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ ಘಟನೆ ಸುರತ್ಕಲ್ ಎನ್ ಐಟಿಕೆ ಸಮೀಪದ ಸದಾಶಿವ ದೇವಸ್ಥಾನದ ಬಳಿಯ ರವಿವಾರ ಸಂಜೆ ನಡೆದಿದೆ.

ಸಮುದ್ರ ಪಾಲಾಗಿರುವ ವ್ಯಕ್ತಿಯನ್ನು ಬಾಗಲಕೊಠೆ ಜಿಲ್ಲೆಯ ಬಾದಾಮಿ ತಾಲೂಕಿನ ಹವಳಕೋಳ ಗ್ರಾಮದ ನಿವಾಸಿ ಮಹಂತೇಶ್(21) ಎಂದು ಗುರುತಿಸಲಾಗಿದೆ.

ಮಹಂತೇಶ್ ಅವರು ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋದವರು ಕೆಲಸಕ್ಕೆ ಹೋಗದೆ ಆತನ ಸ್ನೇಹಿತನಾದ ಮಾಹಂತೇಶ್ ವಿಜಯಪುರ ಹಾಗೂ ಮತ್ತೊಬ್ಬ ಯುವಕನೊಂದಿಗೆ ಸುರತ್ಕಲ್ ನ ಸದಾಶಿವ ದೇವಸ್ಥಾನದ ಬಳಿಯ ಸಮಯದ ತೀರಕ್ಕರ ವಿಹಾರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿದ್ದರು. ಈ ವೇಳೆ ಅವರ‌ ಸ್ನೇಹಿತ ಮಾಂತೇಶ್ ವಿಜಯಪುರ ಎಂಬವರು ಆತನನ್ನು ರಕ್ಷಿಸಿ ತಡಕ್ಕೆ ಕರೆತರುತ್ತಿದ್ದ ವೇಳೆ ಮತ್ತೆ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿ ಮಹಂತೇಶ್ ಅವರ ಪತ್ನಿ ಸಾವಿತ್ರಿ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News