ರಾಜಸ್ಥಾನದ ಕೋಟಾದಲ್ಲಿ ಶಿವರಾತ್ರಿ ಮೆರವಣಿಗೆ ವೇಳೆ 14 ಮಕ್ಕಳಿಗೆ ವಿದ್ಯುದಾಘಾತ

Update: 2024-03-08 09:54 GMT

Screengrab: X/@ANI

ಕೋಟಾ: ರಾಜಸ್ಥಾನದ ಕೋಟಾದಲ್ಲಿ ಇಂದು ಮಹಾಶಿವರಾತ್ರಿ ಮೆರವಣಿಗೆ ವೇಳೆ 14 ಮಕ್ಕಳಿಗೆ ವಿದ್ಯುದಾಘಾತದಿಂದ ಗಂಭಿರ ಗಾಯಗಳುಂಟಾಗಿವೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಹೀರಾಲಾಲ್‌ ನಗರ್‌ ತಿಳಿಸಿದ್ದಾರೆ.

ಹೈ-ಟೆನ್ಶನ್‌ ವಿದ್ಯುತ್‌ ತಂತಿಯಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಇಬ್ಬರು ಮಕ್ಕಳಿಗೆ ಶೇ 50 ಹಾಗೂ ಶೇ 100ರಷ್ಟು ಸುಟ್ಟ ಗಾಯಗಳುಂಟಾಗಿದ್ದರೆ ಉಳಿದವರಿಗೆ ಶೇ 50ಕ್ಕಿಂತ ಕಡಿಮೆ ಸುಟ್ಟ ಗಾಯಗಳುಂಟಾಗಿವೆ.

ಯಾವುದೇ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆಯೇ ಎಂದು ಕಂಡುಕೊಳ್ಳಲು ಸಂಬಂಧಿತರಿಗೆ ಸೂಚಿಸಲಾಗಿದೆ ಎಂದು ಹೀರಾಲಾಲ್‌ ನಗರ್‌ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News