ಹರ್ಯಾಣ ವಿಧಾನಸಭಾ ಚುನಾವಣೆ| ಮತಗಟ್ಟೆಗೆ ಕುದುರೆ ಏರಿ ಬಂದ ಬಿಜೆಪಿ ಸಂಸದ ನವೀನ್ ಜಿಂದಾಲ್

Update: 2024-10-05 09:01 GMT

Screengrab:X/ANI

ಕುರುಕ್ಷೇತ್ರ: ಹರ್ಯಾಣ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ನಡುವೆ ಬಿಜೆಪಿ ಸಂಸದ ನವೀನ್ ಜಿಂದಾಲ್ ಕುದುರೆ ಏರಿ ಕುರುಕ್ಷೇತ್ರ ವಿಧಾನಸಭೆಯ ಮತಗಟ್ಟೆಯೊಂದಕ್ಕೆ ತಲುಪಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೊವೊಂದರಲ್ಲಿ, ನವೀನ್ ಜಿಂದಾಲ್ ಕುದುರೆ ಏರಿ ಮತಗಟ್ಟೆಯೊಂದಕ್ಕೆ ಖುದ್ದಾಗಿ ಬರುತ್ತಿದ್ದು, ಅವರ ಭದ್ರತಾ ಸಿಬ್ಬಂದಿಗಳು ರಸ್ತೆ ಬದಿಯಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ.

ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನವೀನ್ ಜಿಂದಾಲ್, ಕುದುರೆಯನ್ನು ಪವಿತ್ರ ಎಂದು ಭಾವಿಸುವುದರಿಂದ, ನಾನು ಕುದುರೆ ಏರಿ ಮತಗಟ್ಟೆಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಹರ್ಯಾಣ ಮತದಾರರು ಬಿಜೆಪಿಗೆ ಮತ್ತೊಮ್ಮೆ ಆಶೀರ್ವದಿಸಿ ಸತತ ಮೂರನೆಯ ಬಾರಿಗೆ ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News