ಉತ್ತರ ಪ್ರದೇಶ: ಶುಲ್ಕ ಕೇಳಿದ್ದಕ್ಕೆ ಟೋಲ್ ಬೂತ್‌ ಅನ್ನೇ ಧ್ವಂಸಗೊಳಿಸಿದ ಬುಲ್ಡೋಜರ್ ಚಾಲಕ

Update: 2024-06-11 09:09 GMT

Photo: NDTV

ಹೊಸದಿಲ್ಲಿ: ಶುಲ್ಕ ಪಾವತಿಸುವಂತೆ ಕೇಳಿದ್ದಕ್ಕೆ ಬುಲ್ಡೋಜರ್ ಚಾಲಕ ಟೋಲ್‌ ಬೂತ್‌ ಅನ್ನೇ ಧ್ವಂಸಗೊಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಬುಲ್ಡೋಜರ್ ಬೂತ್‌ನ ನಿರ್ಗಮನ ಸ್ಥಳದಲ್ಲಿಯ ಕಬ್ಬಿಣದ ಸ್ತಂಭಗಳಿಗೆ ಅಪ್ಪಳಿಸುತ್ತಿರುವುದನ್ನು ಟೋಲ್ ಸಿಬ್ಬಂದಿಗಳು ಚಿತ್ರೀಕರಿಸಿರುವ ವೀಡಿಯೊ ತೋರಿಸಿದೆ.

ಘಟನೆಯು ಇಂದು ಬೆಳಿಗ್ಗೆ ದಿಲ್ಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯ ಹಾಪುರ್‌ನಲ್ಲಿ ನಡೆದಿದೆ.

‘ಶುಲ್ಕವನ್ನು ಪಾವತಿಸಿ’ಎಂದು ಸಿಬ್ಬಂದಿಗಳು ಸೂಚಿಸಿದ ಬೆನ್ನಲ್ಲೇ ಬುಲ್ಡೋಜರ್‌ನ್ನು ಮುನ್ನುಗ್ಗಿಸಿದ ಚಾಲಕ ಎರಡೂ ಬೂತ್‌ಗಳನ್ನು ಧ್ವಂಸಗೊಳಿಸಿದ್ದಾನೆ.

ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಪರಾರಿಯಾಗಿರುವ ಚಾಲಕನಿಗಾಗಿ ಹುಡುಕಾಟದಲ್ಲಿ ತೊಡಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News