ಸುಪ್ರೀಂ ಕೋರ್ಟ್ ಕಲಾಪ ವರದಿಗಾರರಿಗೆ ಕಾನೂನು ಪದವಿ ಬೇಕಿಲ್ಲ : ಸಿಜೆಐ ಡಿ ವೈ ಚಂದ್ರಚೂಡ್

Update: 2024-10-24 12:22 GMT

 ಸಿಜೆಐ ಡಿ ವೈ ಚಂದ್ರಚೂಡ್ | PC : PTI 

ಹೊಸದಿಲ್ಲಿ : ಸುಪ್ರೀಂ ಕೋರ್ಟ್ ಕಲಾಪ ವರದಿಗಾರರಿಗೆ ಮಾನ್ಯತೆ ಪಡೆಯಲು ಕಾನೂನು ಪದವಿ ಬೇಕಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ ಎಂದು barandbench ವರದಿ ಮಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಜೆಐ ಡಿ ವೈ ಚಂದ್ರಚೂಡ್ ಈ ವಿಚಾರ ಹಂಚಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ವರದಿಗಾರರಾಗಿ ಮಾನ್ಯತೆ ಪಡೆಯಲು ಕಾನೂನು ಪದವಿಯನ್ನು ಪಡೆದಿರಬೇಕು ಎಂದು ಈ ಹಿಂದೆ ಇದ್ದ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಈ ಬಗ್ಗೆ ಕಡತಕ್ಕೆ ಈಗಾಗಲೇ ಸಹಿ ಹಾಕಲಾಗಿದೆ ಎಂದು ಹೇಳಿದ್ದಾರೆ.

ಮಾನ್ಯತೆ ಪಡೆದ ಪತ್ರಕರ್ತರಿಗೆ ಸುಪ್ರೀಂ ಕೋರ್ಟ್ ಪಾರ್ಕಿಂಗ್‌ ನಲ್ಲಿ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಿಜೆಐ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News