ನಿತೀಶ್‌ ಕುಮಾರ್‌ ಮತ್ತೆ ಉಲ್ಟಾ ಹೊಡೆಯುವುದಿಲ್ಲ ಎಂದು ಪ್ರಧಾನಿ ಗ್ಯಾರಂಟಿ ನೀಡುವರೇ?: ತೇಜಸ್ವಿ ಯಾದವ್‌ ವ್ಯಂಗ್ಯ

Update: 2024-02-12 11:02 GMT

Screengrab:X/ANI

ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿಇಂದು ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರದ ವಿಶ್ವಾಸಮತ ಪರೀಕ್ಷೆಗೆ ಮುನ್ನ ಮಾತನಾಡಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, “ನಿತೀಶ್‌ ಕುಮಾರ್‌ ಮತ್ತೆ ಉಲ್ಟಾ ಹೊಡೆಯುವುದಿಲ್ಲ ಎಂದು ಪ್ರಧಾನಿ ಮೋದಿ ಗ್ಯಾರಂಟಿ ನೀಡುವರೇ?” ಎಂದು ವ್ಯಂಗ್ಯವಾಡಿದರು.

ತಮ್ಮ ಮಿತ್ರ ಪಕ್ಷಗಳನ್ನು ಆಗಾಗ ಬದಲಿಸಿಕೊಂಡು ಹಲವಾರು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಿತೀಶ್‌ ಕುಮಾರ್‌ ಅವರನ್ನು ತೇಜಸ್ವಿ ಅಣಕವಾಡಿದರು.

ಇಂದು ವಿಶ್ವಾಸಮತಕ್ಕೂ ಮುನ್ನ ಮೂವರು ಆರ್‌ಜೆಡಿ ಶಾಸಕರು ಆಡಳಿತ ಮೈತ್ರಿಕೂಟದತ್ತ ವಾಲಿದ್ದಾರೆ ಹಾಗೂ ಈ ಮೂಲಕ ಅಲ್ಲಿನ ಮಹಾಮೈತ್ರಿಕೂಟಕ್ಕೆ ಹೊಡೆತ ನೀಡಿದ್ದಾರೆ.

ಬಿಹಾರದಲ್ಲಿ ಜೆಡಿ(ಯು) ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಮಹಾಮೈತ್ರಿಕೂಟದಿಂದ ಹೊರಬಂದು ಬಿಜೆಪಿ ಜೊತೆ ಕೈಜೋಡಿಸಿ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಇಂದು ರಾಜ್ಯ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಗೆದ್ದಿದ್ದಾರೆ.

ವಿಪಕ್ಷಗಳಾದ ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್‌ ಮತ್ತು ಎಡ ಪಕ್ಷಗಳ ಶಾಸಕರು ವಿಶ್ವಾಸಮತಕ್ಕೂ ಮುನ್ನ ಸಭಾ ತ್ಯಾಗ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News