ಸಂಗೀತ ಶಾರದೆ-ವಿದುಷಿ ರಾಜಲಕ್ಷ್ಮೀ ಶ್ರೀಧರ್

Update: 2016-03-07 11:20 GMT

ಸಹೃದಯವಂತೆ ರಾಜಲಕ್ಷ್ಮೀ ಶ್ರೀಧರ್ ಅವರು ಸಂಗೀತ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿದ್ದರೂ ನಿಗರ್ವಿ. ‘ಸಾಧನೆಗೆ ಕೊನೆಯೇ ಇಲ್ಲ, ಸಾಧಿಸಬೇಕಾದದ್ದು ಇನ್ನೂ ಇದೆ’ ಎಂಬುವುದು ಅವರ ಸ್ಪಷ್ಟ ನುಡಿ...

ಬಿ. ಬಸವರಾಜು ಮೈಸೂರು

ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆ ಜಿ. ರಾಜಲಕ್ಷ್ಮೀ ಶ್ರೀಧರ್ ಅವರದು ಸಂಗೀತ ಮನೆತನ. ಇವರ ತಂದೆ ದಿವಂಗತ ವಿದ್ವಾನ್‌ಟಿ.ಆರ್. ಗೋಪಾಲನ್ ಅವರು ನಮ್ಮ ನಾಡಿನ ಶ್ರೇಷ್ಠ ಸಂಗೀತಗಾರರು. ಇವರುಕೀರ್ತಿಶೇಷ ಮೈಸೂರು ಬಿ.ಕೆ. ಪದ್ಮನಾಭರಾಯರ ಪ್ರಮುಖ ಶಿಷ್ಯರು. ಇವರು ಮೈಸೂರು ವಾಸುದೇವಾಚಾರ್ ಅವರ ಶಿಷ್ಯರು. ಈ ಕಾರಣದಿಂದ ಜಿ. ರಾಜಲಕ್ಷ್ಮೀ ಶ್ರೀಧರ್ ಅವರು ಸಂಗೀತ ಕಲಾನಿಧಿ ಮೈಸೂರು ವಾಸುದೇವಾಚಾರ್ಯರ ಸಂಗೀತ ಪರಂಪರೆಗೆ ಸೇರಿದ್ದಾರೆ. ಜಿ. ರಾಜಲಕ್ಷ್ಮೀ ಶ್ರೀಧರ್ ಅವರಿಗೆ ಬಾಲ್ಯದಿಂದಲೇ ತಂದೆಯವರಿಂದ ಕ್ರಮಬದ್ಧ ಸಂಗೀತ ಪಾಠ.

ರಾಜಲಕ್ಷ್ಮೀ ಶ್ರೀಧರ್ ಅವರು ಆಕಾಶವಾಣಿ ಹಾಗೂ ದೂರದರ್ಶನದ ಉನ್ನತ ದರ್ಜೆಕಲಾವಿದೆ. ಇವರ ಸಂಗೀತ ಕಾರ್ಯಕ್ರಮಗಳು ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಮೂಡಿ ಬರುತ್ತಿರುತ್ತವೆ. ತಮ್ಮ 8ನೆ ವಯಸ್ಸಿನಲ್ಲಿಯೇ ಬೆಂಗಳೂರಿನ ಬಳೆಪೇಟೆಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿನ ಹಲವಾರು ಪ್ರತಿಷ್ಠಿತ ಸಂಗೀತ ಸಭೆಗಳಲ್ಲಿ, ಉತ್ಸವಗಳಲ್ಲಿ ಇವರು ಅಮೋಘವಾಗಿ ಸಂಗೀತ ಕಛೇರಿ ಗಳನ್ನು ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು:-

1. ಇವರು ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಎಂ.ಎ. ಮ್ಯೂಸಿಕ್ ಓದುತ್ತಿದ್ದಾಗ, ಕೀರ್ತಿಶೇಷರಾದ ಆನೂರು ಎಸ್.ರಾಮಕೃಷ್ಣ ಮತ್ತು ಬೆಂಗಳೂರು ಕೆ. ವೆಂಕಟರಾಮ್ ಅವರ ನಿರ್ದೇಶನದಲ್ಲಿ ವಿಶೇಷ ಪಲ್ಲವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದ್ದು, ಕಾರ್ಯಕ್ರಮಕ್ಕೆ ಸಂಗೀತ ದಿಗ್ಗಜರಾದ ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೈ ಅವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದರು. ಅವರು ಜಿ.ರಾಜಲಕ್ಷ್ಮೀ ಶ್ರೀಧರ್ ಅವರ ಗಾಯನವನ್ನು ಮೆಚ್ಚಿ 101ರೂ. ಅನ್ನು ಆಶೀರ್ವಾದ ಪೂರ್ವಕವಾಗಿ ನೀಡಿರುವುದು ನಿಜಕ್ಕೂ ಪ್ರಶಂಸನೀಯ.

Once More 2. ಇವರು ರಾಗ, ತಾಳ, ಪಲ್ಲವಿ ಹಾಡುಗಾರಿಕೆಗೆ ಅತ್ಯಂತ ಹೆಸರುವಾಸಿ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಆಶ್ರಯದಲ್ಲಿ ಬೆಂಗಳೂರಿನ ಯವನಿಕಾದಲ್ಲಿ ನಡೆದ ವಿಶೇಷ ಪಲ್ಲವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯಂತ ಕ್ಲಿಷ್ಟವಾದ ಅವಧಾನ ಪಲ್ಲವಿಯನ್ನು ಹಾಡಿ ಅನೇಕ ಘನ ವಿದ್ವಾಂಸರಿಂದ, ಕೇಳುಗರಿಂದ ಶಹಭಾಸ್‌ಗಿರಿಯನ್ನು ಪಡೆದರು. ಸಂಗೀತಾಸಕ್ತರು ಎಂದು ಕೂಗಿ ಮತ್ತೊಮ್ಮೆ ಇವರಿಂದ ಪಲ್ಲವಿ ಹಾಡಿಸಿದರು. ಈ ಕಾರ್ಯಕ್ರಮಕ್ಕೆ ಅವಧಾನ ಪಲ್ಲವಿ ಹಾಡುವುದರಲ್ಲಿ ಅತ್ಯಂತ ಖ್ಯಾತನಾಮರಾಗಿದ್ದ ಪಲ್ಲವಿ ಚಂದ್ರಪ್ಪನವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದು ವಿಶೇಷವೆನ್ನಬಹುದು.

3. ನಮ್ಮ ನಾಡಿನ ಪ್ರಖ್ಯಾತ ವೀಣಾ ವಿದ್ವಾಂಸರಾಗಿದ್ದ ಕೀರ್ತಿ ಶೇಷರಾದ ಡಾ.ವಿ.ದೊರೆಸ್ವಾಮಿ ಅಯ್ಯಂಗಾರ್ ಮತ್ತು ವಯೋಲಿನ್ ವಿದ್ವಾಂಸರಾಗಿದ್ದ ಆನೂರು ಎಸ್.ರಾಮಕೃಷ್ಣ ಅವರ ಸಂಗೀತ ನಿರ್ದೇಶನ ಹಾಗೂ ಹೆಸರಾಂತ ಕಲಾ ವಿಮರ್ಶಕರಾಗಿದ್ದ ಕೀರ್ತಿಶೇಷ ಶ್ರೀ ಬಿ.ವಿ.ಕೆ. ಶಾಸ್ತ್ರಿ ಅವರ ವ್ಯಾಖ್ಯಾನದಲಿ ್ಲಚೆನ್ನೈನ ಮ್ಯೂಸಿಕ್ ಅಕಾಡಮಿಯಲ್ಲಿ ಡಿ.ವಿ.ಜಿ. ಅವರ ಸುಪ್ರಸಿದ್ಧ ಅಂತಃಪುರ ಗೀತೆಗಳನ್ನು ಹಾಡಲು ವಿದ್ಯಾರ್ಥಿಗಳನ್ನು ಆಡಿಷನ್ ಮಾಡಿ ಆರಿಸಲಾಯಿತು. ಅದರಲ್ಲಿ ಜಿ.ರಾಜಲಕ್ಷ್ಮೀ ಶ್ರೀಧರ್ ಕೂಡ ಒಬ್ಬರು. ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಂಗೀತ ದಿಗ್ಗಜರಾದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಎಂ.ಡಿ. ರಾಮನಾಥನ್, ಡಿ.ಕೆ. ಜಯರಾಮನ್ ಮುಂತಾದವರೆಲ್ಲರೂ ಆಗಮಿಸಿದ್ದು, ಎಲ್ಲರೂ ಈ ಕಾರ್ಯಕ್ರಮವನ್ನು ಮೆಚ್ಚಿದ್ದರು.

4. ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ಇವರಿಗೆ ಮೆರಿಟ್ ಸ್ಕಾಲರ್‌ಶಿಪ್ ಲಭಿಸಿದ್ದು, ಅಂದಿನ ಮಂತ್ರಿಗಳಾಗಿದ್ದ ಸ್ಪೀಕರ್ ನಾಗರತ್ನಮ್ಮನವರು ಇದನ್ನು ಪೊಡ ಮಾಡಿದರು.

ಇವರ ಪ್ರಮುಖ ಸಂಗೀತ ಕಛೇರಿಗಳು

Solo Concert, Music Opera

Programme Executive ಕರ್ನಾಟಕ ಸಂಗೀತ ನೃತ್ಯಅಕಾಡಮಿಯಿಂದ ಕಾರ್ಕಳದಲ್ಲಿ ಸಂಗೀತ ಕಾರ್ಯಕ್ರಮ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೈಸೂರಿನಲ್ಲಿ ಸಂಗೀತ ಕಾರ್ಯಕ್ರಮ; ಸುನಾದ ಸಂಗೀತ ಕಲಾ ಶಾಲೆ, ಪುತ್ತೂರು, ದಕ್ಷಿಣ ಕನ್ನಡ; ಶ್ರೀ ದುರ್ಗಾ ಪರಮೇಶ್ವರಿದೇವಸ್ಥಾನ, ಬಪ್ಪನಾಡು, ದಕ್ಷಿಣಕನ್ನಡ; ಬೆಂಗಳೂರಿನ ರಾಜಾಜಿನಗರ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್; ಶ್ರೀ ತ್ಯಾಗರಾಜ ಸಂಗೀತ ಸಭಾ, ಮೈಸೂರು; ಶ್ರೀ ತ್ಯಾಗರಾಜ ಸಂಗೀತ ಸಭಾ, ಬೆಂಗಳೂರು; ಜೆ.ಎಸ್.ಎಸ್. ಸಂಗೀತ ಸಭಾಟ್ರಸ್ಟ್, ಮೈಸೂರು (ದಿನಾಂಕ 17-08-2009 -ಮೈಸೂರು ವಾಸುದೇವಾಚಾರ್ಯರ ಅಪರೂಪದ ರಚನೆಗಳು), ಜೆ.ಎಸ್.ಎಸ್. ಸಂಗೀತ ಸಭಾಟ್ರಸ್ಟ್- ಮೈಸೂರು (ದಿನಾಂಕ 05-12-2007 - ಪಂಚನಡೆ ಪಲ್ಲವಿ); ಕರ್ನಾಟಕ ಗಾನಕಲಾ ಪರಿಷತ್, ಬೆಂಗಳೂರು (ಗಣಪತಿಯನ್ನು ಕುರಿತು ಅಪರೂಪದ ರಚನೆಗಳು, ಪಲ್ಲವಿ ಹಾಡುಗಾರಿಕೆ); ಬೆಂಗಳೂರು ಗಾಯನ ಸಮಾಜ; ಎನ್.ಐ.ಇ. ಕಾಲೇಜು, ಮೈಸೂರು; ಗಾನಭಾರತಿ, ಮೈಸೂರು; ನಾದಮಂದಿರ, ಮೈಸೂರು; ಅರಮನೆ ಸಂಗೀತೋತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು; ಮೈಸೂರುದಸರಾ ಮಹೋತ್ಸವ-2006 (ವೀಣೆ ಶೇಷಣ್ಣ ಭವನದಲ್ಲಿ); ತಲಕಾಡುಉತ್ಸವ-2006 (ಕನ್ನಡ ಮತ್ತು ಸಂಸ್ಕೃತಿ ಇಲಾಖೆ); ಶ್ರೀ ವಾದಿರಾಜರಆರಾಧನಾ - ಶ್ರೀ ವಾದಿರಾಜ ವಿರಚಿತ ಭ್ರಮರಗೀತಂ - ಪರಿಕಲ್ಪನೆ, ರಚನೆ, ಸಂಗೀತ ನಿರ್ದೇಶನ, ಹಾಡುಗಾರಿಕೆ: ಪ್ರೊ.ಆರ್. ವಿಶ್ವೇಶ್ವರನ್; ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ವೃತ್ತಿಜೀವನದ ಅನುಭವ :- ರಾಜಲಕ್ಷ್ಮೀ ಶ್ರೀಧರ್ ಅವರು ಆಕಾಶವಾಣಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಸಂಗೀತ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮಗಳನ್ನು ಅತ್ಯುನ್ನತವಾಗಿ ನೀಡಿದ್ದಾರೆ. ಯು.ಪಿ.ಎಸ್.ಸಿ.ಯ ಸ್ಪರ್ಧಾತ್ಮಕ ಸಂದರ್ಶನದಲ್ಲಿ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಆಗಿ ಆಯ್ಕೆ ಆಗಿದ್ದು, ಇವರ ಪ್ರತಿಭೆಗೆ ಸಾಕ್ಷಿ. ಮೈಸೂರು ಆಕಾಶವಾಣಿಯ ಕಾಫಿ-ತಿಂಡಿ ಕಾರ್ಯಕ್ರಮದಲ್ಲಿ ಹಲವಾರು ಕ್ಷೇತ್ರಗಳ ದಿಗ್ಗಜರನ್ನು ಮಾತನಾಡಿಸಿದ ಹೆಗ್ಗಳಿಕೆ ಇವರದು. ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್‌ರಾವ್, ಡಾ. ರಂಗನಾಥ, ಪ್ರೊ.ಆರ್. ವಿಶ್ವೇಶ್ವರನ್, ಎಸ್.ಕೆ. ವಸುಮತಿ, ಅಂದಿನ ಸಚಿವೆ ಶೋಭಾ ಕರಂದ್ಲಾಜೆ ಇನ್ನೂ ಅನೇಕ ಗಣ್ಯರ ಸಂದರ್ಶನ ಮಾಡಿ ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ನಡೆಸಿಕೊಡುತ್ತಿದ್ದ ನವಿಲುಗರಿ ಕಾರ್ಯಕ್ರಮ ಬಹಳ ಪರಿಣಾಮಕಾರಿಯಾಗಿತ್ತು. ಶಾಸ್ತ್ರೀಯ ಸಂಗೀತದ ಬಗ್ಗೆ ಒಲವು ಮೂಡಿಸಲು ನವಿಲುಗರಿ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು. ಸುಮರು 69 ರಾಗಗಳ ಬಗ್ಗೆ ಕೇಳುಗರಿಗೆ ಮಾಹಿತಿ ನೀಡಿದ್ದಾರೆ. ಇವರು ಸಂಗೀತದ ಬಗ್ಗೆ ನಡೆಸುತ್ತಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಭಾಗವಹಿಸುತ್ತಿದ್ದುದು ವಿಶೇಷ. ಹಾಗಾಗಿ ಇವರು ರೇಡಿಯೊ ಸಂಗೀತದ ಗುರುಗಳೇ ಆಗಿದ್ದರು. ಬ್ರಿಟನ್ನಿನ ಎಕ್ಸ್ ಮೇಯರ್‌ಕನ್ನಡಿಗ ನೀರಜ್ ಪಾಟೀಲ್ ಸಂದರ್ಶನ ಕೂಡ ಆಕಾಶವಾಣಿಯಲ್ಲಿ ಮಾಡಿದ ಹೆಗ್ಗಳಿಕೆ ಇವರದು.

ಇವರು ನಿರ್ಮಿಸಿದ ಸೃಜನಶೀಲ ಕಾರ್ಯಕ್ರಮಗಳಾದ ನಿಸರ್ಗ ವಂದನ 2002 ಹಾಗೂ ವಚನ ಪದ ವೈದ್ಯ 2008 2 ಬಾರಿ ರಾಜ್ಯಮಟ್ಟದ ಆಕಾಶವಾಣಿ ವಾರ್ಷಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ. ಅಲ್ಲದೆ, ಆಹತಅನಾಹತ ಎಂಬ ಸಂಗೀತರೂಪಕ ಮತ್ತು ವಚನ ಪದ ವೈದ್ಯ 4 ಕಾರ್ಯಕ್ರಮಗಳಿಗೆ ಪತ್ರಿಕೆಗಳಲ್ಲಿ ಸಾಕಷ್ಟು ಪ್ರಚಾರ ಸಿಕ್ಕಿದೆ. ಡಾ. ಸಿ. ನಾಗಣ್ಣ ಅವರಂತಹ ಪ್ರಖ್ಯಾತ ಪ್ರೊಫೆಸರ್ ಈ ಕಾರ್ಯಕ್ರಮ ಮೆಚ್ಚಿದ್ದಾರೆ.

ಈಚೆಗೆ ಹಾಸನ ಆಕಾಶವಾಣಿ ವತಿಯಿಂದ ಹಾಸನದ ಎಸ್.ಆರ್.ಎಸ್. ಚೌಲ್ಟ್ರಿಯಲ್ಲಿ ನಾಡಿನ ಸುವಿಖ್ಯಾತ ಸಂಗೀತ ಕಲಾವಿದೆ ಡಾ.ಸುಕನ್ಯಾ ಪ್ರಭಾಕರ್ ಅವರ ನಿರ್ದೇಶನದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಜಿ. ರಾಜಲಕ್ಷ್ಮೀ ಶ್ರೀಧರ್ ರವರು ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿಯೇ ಸರಿ. ಈ ಕಾರ್ಯಕ್ರಮದ ಪರಿಕಲ್ಪನೆ ಹಾಗೂ ನಿರ್ಮಾಣ ಕೂಡ ರಾಜಲಕ್ಷ್ಮೀ ಶ್ರೀಧರ್ ಅವರದ್ದೇ. ಮೊಟ್ಟಮೊದಲ ಬಾರಿಗೆ ಮೈಸೂರು ಆಕಾಶವಾಣಿಯ ರಾಗೋಲ್ಲಾಸ ಕಾರ್ಯಕ್ರಮದಲ್ಲಿ ಮೇಳರಾಗೋಲ್ಲಾಸ ಕಾರ್ಯಕ್ರಮವನ್ನು ನಿರ್ಮಾಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಕಾರ್ಯಕ್ರಮಗಳನ್ನು ಕೇಳಿದ ಪ್ರೊ.ಜಿ.ಟಿ. ನಾರಾಯಣರಾವ್ ಅವರು ದೂರವಾಣಿಕರೆ ಮೂಲಕ, ಈ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡು, ಮತ್ತೆ ಪುನಃ ಪ್ರಸಾರ ಮಾಡಬೇಕೆಂದೂ, ಅದರಿಂದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತಿದೆ ಎಂದರು.

ಕಾರ್ಯಕ್ರಮಗಳ ನಿರೂಪಕಿಯಾಗಿ ನಿರೂಪಣೆ ಇವರ ಅತ್ಯಂತ ಪ್ರಿಯಕ್ಷೇತ್ರ. ಉತ್ಸಾಹಭರಿತ, ಚೇತೋಹಾರಿ, ಸ್ಪಷ್ಟ ಮಧುರಧ್ವನಿಯಲ್ಲಿ ಮೂಡಿ ಬರುವ ನಿರೂಪಣೆಎಂತಹವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳಿಗೆ, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ್ದಾರೆ. ಗಾನ ಗಾರುಡಿಗಡಾ. ಪಿ.ಬಿ. ಶ್ರೀನಿವಾಸ್ ಅವರ ಸಂಸ್ಮರಣೆಯಲ್ಲಿ ಕೊಳ್ಳೇಗಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದರ ನಿರೂಪಣೆ ಮಾಡಿಚಿತ್ರಗೀತೆ ಹಾಡಿರುವುದು ವಿಶೇಷ.

ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ರಾಗತರಂಗ ಏರ್ಪಡಿಸಿದ್ದ ಭಾವ ಮಂಥನ ಕಾರ್ಯಕ್ರಮಕ್ಕೆ ಕಂಠದಾನ ಮಾಡಿದ್ದಾರೆ. ಭಾಸಂಗೆ ಬಳಗ, ಮೈಸೂರು ಇವರು ಮೈಸೂರಿನ ನಾದಬ್ರಹ್ಮ ಸಂಗೀತ ಸಭೆಯಲ್ಲಿ ನಡೆಸಿದ ವಸಂತಗಾನ ಕಾರ್ಯಕ್ರಮದ ನಿರೂಪಣೆ. ಪ್ರಖ್ಯಾತ ಇ.ಎನ್.ಟಿ. ವೈದ್ಯಡಾ. ಎಮ್.ಎಸ್. ನಟಶೇಖರ್ ಅವರು ಹೊರತಂದ ವಚನ ಗಾಯನ ಗಂಗಾ ಸಿ.ಡಿ. ಕಾರ್ಯಕ್ರಮಕ್ಕೆ ಹಾಗೂ ಡಾ. ಎ.ಎಲ್. ಹೇಮಲತಾ ಅವರ ಹಾಡುಗಳ ಸಿ.ಡಿ. ಬಿಡುಗಡೆ ಕಾರ್ಯಕ್ರಮದಲ್ಲಿ ರಾಜಲಕ್ಷ್ಮೀ ಶ್ರೀಧರ್ ಅವರದ್ದೇ ಅಚ್ಚುಕಟ್ಟಾದ ನಿರೂಪಣೆ.

ಬಹುಮಾನ, ಪ್ರಶಸ್ತಿ ಪತ್ರಗಳು, ಸನ್ಮಾನ: ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ಅವರಿಂದ ಸ್ವೀಕರಿಸಿದ್ದಾರೆ. ರೋಟರಿ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ - ಬೆಳ್ಳಿ ಪದಕ, ಬೆಂಗಳೂರು ಗಾಯನ ಸಮಾಜದ ಜೂನಿಯರ್ ವಿಭಾಗದ ಸಂಗೀತ ಕಛೇರಿಗಾಗಿ ಮೆರಿಟ್ ಸರ್ಟಿಫಿಕೇಟ್. ವಿಕ್ರಮ್ ಆಸ್ಪತ್ರೆಯ ಡಾ. ಎಚ್.ವಿ. ಸತೀಶ್ ಅವರಿಂದ ಪ್ರಶಂಸಾ ಪತ್ರ, ವಿಕ್ರಮ್ ಆಸ್ಪತ್ರೆಯ ಡಾ. ವಿಕ್ರಮ್ ಅವರು ನಿರ್ಮಿಸಿದ ವಿಕ್ರಮ್ ರೇಡಿಯೊ ಡಾಕ್ಟರ್ ಸರಣಿ ಕಾರ್ಯಕ್ರಮಗಳಿಗೆ ಪ್ರಶಂಸಾ ಪತ್ರ, ಕ್ಯಾನ್ಸರ್ ಬಗ್ಗೆ ಇವರೇ ನಿರೂಪಣೆ ಮಾಡಿದ 26 ಸರಣಿ ಕಾರ್ಯಕ್ರಮಗಳಿಗೆ ಶ್ರೋತೃಗಳಿಂದ ಪ್ರಶಂಸಾ ಪತ್ರ, ಬರವಣಿಗೆ ತಜ್ಞ ಶ್ರೀ ಎಸ್. ನಾರಾಯಣ್‌ರಿಂದ ಪ್ರಶಂಸಾ ಪತ್ರ, ಪ್ರೊ.ಆರ್. ವಿಶ್ವೇಶ್ವರನ್ ಅವರಿಂದ ಆರೋಗ್ಯ ಕಾರ್ಯಕ್ರಮಗಳಿಗೆ ಪ್ರಶಂಸಾ ಪತ್ರ, ಖ್ಯಾತ ಸಂಗೀತ ವಿದ್ವಾನ್ ಶ್ರೀ ಟಿ. ಪಿ. ವೈದ್ಯನಾಥನ್ ಅವರಿಂದ ಸಂಗೀತ ಕಾರ್ಯಕ್ರಮಕ್ಕೆ (ಸಂದರ್ಶನ) ಪ್ರಶಂಸಾ ಪತ್ರ. 2015-16ನೆ ಸಾಲಿನ ಅಕಾಡಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಗಾನ ಸೌರಭ ಕಲಾ ಕೇಂದ್ರದ ವತಿಯಿಂದ ಗಾನ ಕಲಾ ಕೌಸ್ತುಭ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ 2011ರಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಸಮರ್ಪಣಾ ಸಂಸ್ಥೆ ವತಿಯಿಂದ ಸನ್ಮಾನ. 2011ರಲ್ಲಿ ಜೆ.ಎಸ್.ಎಸ್. ಸಂಗೀತ ಸಭೆಯ 18ನೆ ಸಂಗೀತ ಸಮ್ಮೇಳನದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಸನ್ಮಾನ. 2009ರಲ್ಲಿ ವೀಣಾ ಶಾಮಣ್ಣ ಪ್ರತಿಷ್ಠಾನದಿಂದ ಸನ್ಮಾನ, 2013ರಲ್ಲಿ ಸಮುದ್ಯತಾ ಶ್ರೋತೃ ಸಂಘದಿಂದ ಸನ್ಮಾನ, ಸೋರಟ್‌ಅಶ್ವತ್ ಸಂಗೀತ ಶಾಲೆಯಿಂದ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಸನ್ಮಾನ, ಮೈಸೂರಿನ ವಾಗ್ದೇವಿ ಕಲಾ ಸಂಘದಿಂದ ಸನ್ಮಾನ.

ಜಿ. ರಾಜಲಕ್ಷ್ಮೀ ಶ್ರೀಧರ್ ಅವರು ಕೆಳಕಂಡ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

  ಗಾನವಾಣಿ, ಮೈಸೂರು (12-01-2008)

  ಮೈಸೂರು ದಸರಾ ಮಹೋತ್ಸವ(2009)

  ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ವಿದ್ಯಾರ್ಥಿಗಳಿಗೆ ಪೊಡ ಮಾಡುವ ವಿದ್ಯಾರ್ಥಿ ವೇತನಕ್ಕೆ ತೀರ್ಪುಗಾರರಾಗಿ.

  ಆಕಾಶವಾಣಿಯ ಲೋಕಲ್‌ಆಡಿಷನ್ ಕಮಿಟಿಯಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ.

  Songs and Drama Division ಕಲಾ ತಂಡಗಳ ಆಯ್ಕೆಗೆ ನಡೆಸುವ ಧ್ವನಿ ಪರೀಕ್ಷೆಗೆ ತೀರ್ಪುಗಾರರಾಗಿ.

ಸಹೃದಯವಂತೆ ರಾಜಲಕ್ಷ್ಮೀ ಶ್ರೀಧರ್ ಅವರು ಸಂಗೀತ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿದ್ದರೂ ನಿಗರ್ವಿ. ಸಾಧನೆಗೆ ಕೊನೆಯೇ ಇಲ್ಲ, ಸಾಧಿಸಬೇಕಾದದ್ದು ಇನ್ನೂ ಇದೆ ಎಂದು ವಿನಮ್ರರಾಗಿ ಹೇಳುತ್ತಾರೆ. ಅವರಿಗೆ ಶುಭಾಶಯ ಹೇಳಿ: ಶ್ರೀಮತಿ ಜಿ. ರಾಜಲಕ್ಷ್ಮೀ ಶ್ರೀಧರ್,ನಂ. 1089, 9ನೆ ಮೇನ್‌ರೋಡ್, ಗೋಕುಲಂ 3ನೆ ಹಂತ, ಮೈಸೂರು 570002, ಮೊಬೈಲ್ : 9448738728.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News