ಶರಾಬು ಕುಡಿದು ತನಗೇ ಬೆಂಕಿ ಹಚ್ಚಿದ ಭೂಪ! ಸತ್ತೇ ಹೋದ!

Update: 2016-05-16 06:34 GMT

ರಾಯಬರೇಲಿ, ಮೇ 16: ಉತ್ತರ ಪ್ರದೇಶದ ರಾಯಬರೇಲಿ ಖೋರಿ ಕ್ಷೇತ್ರದಲ್ಲಿ ಯುವಕನೊಬ್ಬ ಕುಡಿದ ಅಮಲಿನಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದು ತಾನೇ ಬೆಂಕಿ ಹಚ್ಚಿದ ಪರಿಣಾಮವಾಗಿ ಸುಟ್ಟು ಕರಕಲಾಗಿ ಸತ್ತು ಹೋಗಿದ್ದಾನೆ ಎಂದು ವರದಿಯಾಗಿದೆ.

ಶ್ಯಾಯಪುರದ ಪಪ್ಪುಸೋನಿಗೆ ಶರಾಬು ಕುಡಿಯುವ ಭಾರೀ ಚಟ. ಅವನು ಮೊನ್ನೆಯೂ ಶರಾಬು ಕುಡಿದು ಮನೆಗೆ ಬಂದ ಮತ್ತು ಮನೆಯವರೊಂದಿಗೆ ಜಗಳಕ್ಕೆ ನಿಂತ. ಆನಂತರ ಏನಾಯಿತೋ.ಮನೆಯಲ್ಲಿರಿಸಿದ್ದ ಸೀಮೆ ಎಣ್ಣೆ ಮೈಮೇಲೆ ಸುರಿದು ಬೆಂಕಿ ಹಚ್ಚಿ ಕೊಂಡ. ಶರೀರ ಗಂಭೀರ ರೂಪದಿಂದ ಸುಟ್ಟು ಹೋಗಿತ್ತು. ಆದ್ದರಿಂದ ಇತರರು ಅವನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News