ಕಣ್ಣೂರು: ಸಿಪಿಎಂ ವಿಜಯೋತ್ಸವ ವೇಳೆ ಬಾಂಬ್ ದಾಳಿ; ಒಬ್ಬ ಬಲಿ
Update: 2016-05-19 18:14 GMT
ಕಣ್ಣೂರು, ಮೇ 19: ಹಿಂಸಾಗ್ರಸ್ತ ಕಣ್ಣೂರು ಜಿಲ್ಲೆಯ ಪಿಣರಾಯಿ ಪಟ್ಟಣದಲ್ಲಿ ಚುನಾವಣಾ ವಿಜಯೋತ್ಸವ ಆಚರಿಸುತ್ತಿದ್ದ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್ಡಿಎಫ್) ಕಾರ್ಯಕರ್ತರ ಮೇಲೆ ಗುರುವಾರ ಶಂಕಿತ ಆರೆಸ್ಸೆಸ್ ಕಾರ್ಯಕರ್ತರು ನಾಡಬಾಂಬ್ ಎಸೆದಾಗ ಒಬ್ಬ ಸಿಪಿಎಂ ಕಾರ್ಯಕರ್ತ ಸಾವಿಗೀಡಾಗಿದ್ದಾರೆ.
ಹಿರಿಯ ಸಿಪಿಎಂ ನಾಯಕ ಪಿಣರಾಯಿ ವಿಜಯ್ರ ಗ್ರಾಮದಲ್ಲಿ ನಡೆದ ಈ ದಾಳಿಯಲ್ಲಿ ಇಬ್ಬರು ಎಲ್ಡಿಎಫ್ ಕಾರ್ಯಕರ್ತರಿಗೆ ಗಾಯಗಳಾಗಿವೆ.
ವಿಜಯೋತ್ಸವದ ಮೆರವಣಿಗೆ ನಡೆಸುತ್ತಿದ್ದ ಎಡರಂಗದ ಕಾರ್ಯಕರ್ತರು ಪ್ರದೇಶದಲ್ಲಿ ಬಿಜೆಪಿಯ ಧ್ವಜಸ್ತಂಭವೊಂದನ್ನು ನಾಶಗೊಳಿಸಲು ಯತ್ನಿಸಿದಾಗ ಈ ಘಟನೆ ನಡೆಯಿತು.