ಕುಸ್ತಿಪಟು ನರಸಿಂಗ ಯಾದವ್ಗೆ ಜೀವ ಬೆದರಿಕೆ
ಹೊಸದಿಲ್ಲಿ, ಮೇ 20: ಒಲಿಂಪಿಕ್ಸ್ಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದರೂ, ಸುಶೀಲ್ ಕುಮಾರ್ ಅವರಿಂದಾಗಿ ಸಮಸ್ಯೆ ಎದುರಿಸುತ್ತಿರುವ ಕುಸ್ತಿಪಟು ನರಸಿಂಗ ಪಂಚಮ್ ಯಾದವ್ಗೆ ಇದೀಗ ಜೀವ ಬೆದರಿಕೆ ಎದುರಿಸುವಂತಾಗಿದೆ.
ಸೊನೆಪತ್ನ ಭಾರತದ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ಒಲಿಂಪಿಕ್ಸ್ಗೆ ತಯಾರಿ ನಡೆಸುತ್ತಿರುವ ನರಸಿಂಗ ಯಾದವ್ಗೆ ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಭಾರತದ ಕ್ರೀಡಾ ಪ್ರಾಧಿಕಾರಕ್ಕೆ ಕಳೆದ ಎರಡು ದಿನಗಳಲ್ಲಿ ಎರಡು ಬಾರಿ ಭೇಟಿ ನೀಡಲಾಗಿರುವ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ನರಸಿಂಗ ಯಾದವ್ ಅವರನ್ನು ಮುಗಿಸಲು ತಂಡವೊಂದು ತಯಾರಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಪೊಲೀಸರು ಅವರು ಅಭ್ಯಾಸ ನಡೆಸುತ್ತಿರುವ ಸಾಯ್ ಕೇಂದ್ರದ ಸುತ್ತ ಪೊಲೀಸರು ಸುತ್ತುವರಿದಿದ್ದಾರೆ.
ನರಸಿಂಗ ಯಾದವ್ 2015ರಲ್ಲಿ ಲಾಸ್ ವೇಗಸ್ನಲ್ಲಿ ನಡೆದ ವರ್ಲ್ಡ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚು ಪಡೆದು ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಆದರೆ ಅವರು ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸಿದ ಸುಶೀಲ್ ಕುಮಾರ್ ವಿರುದ್ಧ ಅನಗತ್ಯವಾಗಿ ಸ್ಪರ್ಧೆ ಎದುರಿಸುವಂತಾಗಿದೆ. ಒಲಿಂಪಿಕ್ಸ್ ಆಯ್ಕೆಗೆ ಟ್ರಯಲ್ಸ್ ನಡೆಸುವಂತೆ ಸುಶೀಲ್ ಕುಮಾರ್ ಹೋರಾಟ ನಡೆಸುತ್ತಿದ್ದಾರೆ.