ಶ್ರಿನಗರದಲ್ಲಿ ಉಗ್ರರ ಅಟ್ಟಹಾಸ; ಇಬ್ಬರು ಪೊಲೀಸರು ಸೇರಿದಂತೆ ಮೂವರು ಬಲಿ
Update: 2016-05-23 08:01 GMT
ಶ್ರೀನಗರ ಮೇ 23: ಇಲ್ಲಿನ ಝುಡಿಬಾಲ್ ಪೊಲೀಸ್ ಠಾಣೆಯ ಮೇಲೆ ದಾಳಿ ದಾಳಿ ನಡೆಸಿರುವ ಉಗ್ರರು ಮೂವರು ಪೊಲೀಸರನ್ನು ಸಾಯಿಸಿದ್ದಾರೆ.
ಎಎಸ್ಐ ನಜೀರ್ ಅಹಮ್ಮದ್ ಮತ್ತು ಕಾನಸ್ಟೆಬಲ್ ಬಶೀರ್ ಅಹಮ್ಮದ್ ಉಗ್ರರ ಗುಂಡಿಗೆ ಬಲಿಯಾಗಿರುವ ಪೊಲೀಸರು. ಇನ್ನೋರ್ವ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆ ನಡೆದು ಕೆಲವೇ ನಿಮಿಷಗಳ ಅಂತರದಲ್ಲಿ ಇಲ್ಲಿನ ಟಂಕಿಪೊರ ಎನ್ನುವಲ್ಲಿ ಸಿಆರ್ಪಿಎಫ್ ತುಕಡಿಯ ಮೇಲೆ ದಾಳಿ ನಡೆಸಿದ್ದು ಓರ್ವ ಸಿಬ್ಬಂದಿ ಬಲಿಯಾಗಿದ್ದಾರೆ . ಉಗ್ರ ರು ಪರಾರಿಯಾಗಿದ್ದಾರೆ.