ಸರ್ವಿಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಸೈನಿಕನ ಆತ್ಮಹತ್ಯೆ
ಪಠಾಣ್ಕೋಟ್, ಮೇ 30: ಪಠಾಣ್ಕೋಟ್ನ ಮಮುನ್ ಕಂಟೋನ್ಮೆಂಟ್ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಭೂಸೇನಾ ಯೋಧನೊಬ್ಬ ರವಿವಾರ ತನ್ನ ಸರ್ವಿಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದ ಸಿವಾನ್ ಜಿಲ್ಲೆಯವರಾಗಿದ್ದ 31ರ ಹರೆಯದ ಸಿಪಾಯಿ ಸುಭಾಶ್ ಪ್ರಸಾದ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿವರಾಗಿದ್ದಾರೆ. ಅವರು 68 ಇಂಜಿನಿಯರಿಂಗ್ ಡಿವಿಜನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪ್ರಸಕ್ತ ಅವರನ್ನು ಕಂಟೋನ್ಮೆಂಟ್ ಪ್ರದೇಶದಲ್ಲಿ ಸೆಂಟ್ರಿಯಾಗಿ ನಿಯೋಜಿಸಲಾಗಿತ್ತೆಂದು ಎಸ್ಸೆಸ್ಸಿ ರಾಕೇಶ್ ಕೌಶಲ್ ಹೇಳಿದ್ದಾರೆ.
ಪ್ರಸಾದ್ ಇಬ್ಬರು ಪುತ್ರರು ಹಾಗೂ ಒಬ್ಬಳು ಪುತ್ರಿಯನ್ನು ಅಗಲಿದ್ದಾರೆ.
ಬಂದೂಕಿನ ಸದ್ದು ಕೇಳಿಸಿದೊಡನೆಯೇ ಅವರ ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಸಾದ್ರನ್ನು ಕಂಡರು. ಮಮುನ್ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದನ್ನು ದಾಖಲಿಸಲಾಗಿದೆ. ಘಟನೆಯ ಸಂಬಂಧ ಸೇನೆಯೂ ವಿಚಾರಣೆಗೆ ಆದೇಶಿಸಿದೆಯೆಂದು ಕೌಶಲ್ ತಿಳಿಸಿದ್ದಾರೆ.