ಮೋದೀಜಿ ನಿಮ್ಮ ಎಫ್‌ಐಆರ್‌ಗೆ ಹೆದರುವುದಿಲ್ಲ: ಕೇಜ್ರಿವಾಲ್

Update: 2016-06-22 04:50 GMT

  ಹೊಸದಿಲ್ಲಿ, ಜೂನ್ 22: ತನ್ನ ವಿರುದ್ಧ ಸುಳ್ಳು ಎಫ್‌ಐಆರನ್ನು ದಾಖಲಿಸಲಾಗಿದೆ. ಆರು ತಿಂಗಳ ಹಿಂದೆ ಸಿಬಿಐ ದಾಳಿ ನಡೆಸಿತ್ತು ಅದಕ್ಕೆ ಏನೂ ಸಿಕ್ಕಿಲ್ಲ. ಸಿಬಿಐಯನ್ನೆ ಕೋರ್ಟ್ ತರಾಟೆಗೆತ್ತಿಕೊಂಡಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ತನ್ನ ವಿರುದ್ಧ ದಾಖಲಿಸಲಾದ ಸುಳ್ಳು ಎಫ್‌ಐಆರ್ ಕುರಿತು ಸುದ್ದಿಗಾರರಿಗೆ ತಿಳಿಸಿದ್ದಾರೆ. ತನಗೆ ಕಷ್ಟಕೊಡುವ ಸಂಚು ಈ ಸುಳ್ಳುಎಫ್‌ಐಆರ್ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

   ಮೋದಿ ಧಮಕಿ ಹಾಕಿ ಎಲ್ಲರನ್ನೂ ಹೆದರಿಸುತ್ತಿದ್ದಾರೆ. ಆದರೆ ನಾನು ಮೋದೀಜಿಗೆ ಹೆದರುವವನಲ್ಲ. ಮೋದಿಯ ದುಷ್ಕರ್ಮಗಳ ವಿರುದ್ಧ ನಿಂತಿದ್ದೇನೆ ಎಂದು ನೇರವಾಗಿ ಪ್ರಧಾನಿ ಮೋದಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು. ಮಂಗಳವಾರ ದಿಲ್ಲಿಯಲ್ಲಿ ಟ್ಯಾಂಕರ್ ಹಗರಣ ದಕುರಿತು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ತನ್ನ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಮಾಡಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. "ಮೋದೀಜಿ ನಿಮಗೆ ಹೆದರಲು ನಾನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಲ್ಲ" ಎಂದು ಮೋದಿಗೆ ಈ ಸಂದರ್ಭದಲ್ಲಿ ಕೇಜ್ರಿವಾಲ್ ಸವಾಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News