ದಿಲ್ಲಿಯಲ್ಲಿ ಮೋದಿಯಿಂದ ತುರ್ತು ಪರಿಸ್ಥಿತಿ: ಕೇಜ್ರಿವಾಲ್
Update: 2016-06-25 08:26 GMT
ಹೊಸದಿಲ್ಲಿ, ಜೂ.25: ಶನಿವಾರ ಬೆಳಗ್ಗೆ ನನ್ನ ಪಕ್ಷದ ಶಾಸಕ ದಿನೇಶ್ ಮೊಹಾನಿಯ ಅವರನ್ನು ಸುದ್ದಿಗೋಷ್ಠಿಯ ಮಧ್ಯದಲ್ಲಿ ದಿಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದಿರುವ ಕ್ರಮದಿಂದ ಕೆರಳಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿ ದಿಲ್ಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.