ಕೇರಳ:ಮನೆ ಅಂಗಳದಲ್ಲಿ ಗಾಂಜಾ ಬೆಳೆದ 8 ಮಂದಿ ಸೆರೆ

Update: 2016-07-04 06:21 GMT

ಕೊಚ್ಚಿ,ಜುಲೈ 4: ನಗರದ ಮಧ್ಯದಲ್ಲಿ ಬಾಡಿಗೆ ಮನೆ ಪಡೆದು ಅದರ ಅಂಗಳದಲ್ಲಿ ಗಾಂಜಾ ಕೃಷಿ ಮಾಡುತ್ತಿದ್ದ ಎಂಟು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂನ ಯದು, ಕೃಷ್ಣನ್,ಅಜೇಷ್, ಪಾಲಕ್ಕಾಡ್‌ನ ವಿಷ್ಣು,ಜೈಸನ್, ಸಾಯಿಶಂಕರ್, ಅರುಣ್‌ರಾಜ್, ಬಾಬು ಪವರ್‌ಹೌಸ್‌ನ ಕೆ.ಕೆ. ಪದ್ಮನಾಭನ್ ರಸ್ತೆಯಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಇವರು ಗಾಂಜಾ ಬೆಳೆಯುತ್ತಿದ್ದರು. ಬಂಧಿತರು ನಗರದ ಮಾಲ್‌ಗಳಲ್ಲಿ ಕೆಲಸಮಾಡುತ್ತಿದ್ದಾರೆ.

ಯುವಕರು ವಾಸವಿದ್ದ ಮನೆಯ ಮೂಲಕ ಮಾದಕವಸ್ತು ವ್ಯಾಪಾರ ಮತ್ತು ಬಳಕೆ ಆಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದ ನಿಟ್ಟಿನಲ್ಲಿ ರವಿವಾರ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಮನೆಯ ಮುಂಭಾಗದಲ್ಲಿ ನೆಟ್ಟು ಬೆಳಸಿದ ಗಾಂಜಾ ಗಿಡಗಳನ್ನು ಪೊಲೀಸರು ಪತ್ತೆಮಾಡಿದ್ದಾರೆ.ನಂತರ ಮನೆಯೊಳಗೆ ಹುಡುಕಾಡಿದಾಗ ಗಾಂಜಾ ಮತ್ತು ಅದನ್ನು ಸೇದುವ ಹುಕ್ಕಗಳು ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News