ಸುಡಾನ್ನಲ್ಲಿ ಸಿಲುಕಿಕೊಂಡಿದ್ದ154 ಭಾರತೀಯರು ಸ್ವದೇಶಕ್ಕೆ
Update: 2016-07-15 13:29 GMT
ತಿರುವನಂತಪುರ, ಜು.15: ದಕ್ಷಿಣ ಸುಡಾನ್ನಲ್ಲಿ ಸರಕಾರದ ಸೇನಾ ಪಡೆಗಳು ಮತ್ತು ಬಂಡುಕೋರರ ನಡುವಿನ ಘರ್ಷಣೆಯಿಂದಾಗಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆ ತರುವ ಪ್ರಕ್ರಿಯೆ ಆರಂಭಗೊಂಡಿದೆ. ಅಲ್ಲಿ ಸಿಲುಕಿಕೊಂಡಿರುವ ಭಾರತೀಯರ ಪೈಕಿ 154 ಮಂದಿ ಇಂದು ಬೆಳಗ್ಗೆ ಇಂಡಿಯನ್ ಏರ್ ಪೋರ್ಸ್ನ ವಿಮಾನ ಸಿ-17 ಫ್ಲೈಟ್ ನಲ್ಲಿ ತಿರುವನಂತಪುರಕ್ಕೆ ಆಗಮಿಸಿದ್ದಾರೆ.
ವಿಮಾನದಲ್ಲಿ ಆಗಮಿಸಿದವರ ಪೈಕಿ ಕೇರಳ ಮತ್ತು ತಮಿಳುನಾಡಿನ ನಿವಾಸಿಗಳು ಸೇರಿದ್ದಾರೆ. ಅಲ್ಲದೆ ಇಬ್ಬರು ನೇಪಾಲದ ಪ್ರಜೆಗಳು ವಿಮಾನದಲ್ಲಿ ಆಗಮಿಸಿದ್ದಾರೆ.
ದಕ್ಷಿಣ ಸುಡಾನ್ನಲ್ಲಿ ಸುಮಾರು ಆರು ನೂರು ಭಾರತೀಯರು ಸಿಲುಕಿಕೊಂಡಿದ್ದಾರೆ.