ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ: 8 ಶಾಸಕರ ಅನರ್ಹಗೊಳಿಸಲು ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ

Update: 2016-07-23 08:34 GMT

ಬೆಂಗಳೂರು, ಜು.23: ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಆರೋಪ ಎದುರಿಸುತ್ತಿರುವ ಎಂಟು  ಜೆಡಿಎಸ್ ಶಾಸಕರನ್ನು ಅಮಾನತುಗೊಳಿಸುವಂತೆ ಇಬ್ಬರು ಶಾಸಕರು ಸಲ್ಲಿಸಿರುವ  ಅರ್ಜಿಯ ವಿಚಾರಣೆಯನ್ನು ಇಂದು ಸ್ಪೀಕರ್‌ ಕೋಳಿವಾಡ್‌ ನಡೆಸಿದರು.
ಅಡ್ಡ ಮತದಾನ ಆರೋಪ ಹೊಂದಿರುವ  ಜೆಡಿಎಸ್‌ ಶಾಸಕರುಗಳಾದ ಜಮೀರ್ ಅಹಮದ್ ಖಾನ್, ಚಲುವರಾಯ ಸ್ವಾಮಿ, ಇಕ್ಬಾಲ್ ಅನ್ಸಾರಿ, ಎಚ್. ಸಿ ಬಾಲಕೃಷ್ಣ,  ರಮೇಶ್ ಬಂಡಿಸಿದ್ದೇಗೌಡ,  ಗೋಪಾಲಯ್ಯ,  ಭೀಮಾ ನಾಯಕ್ ಮತ್ತು ಅಖಂಡ ಶ್ರೀನಿವಾಸ್ ಮೂರ್ತಿ ಅವರುಗಳನ್ನು ಅನರ್ಹಗೊಳಿಸಬೇಕೆಂದು ಸ್ಪೀಕರ್ ಗೆ ಜೆಡಿಎಸ್ ನ ಇಬ್ಬರು ಶಾಸಕರುಗಳಾದ ಮೂಡಿಗೆರೆಯ ಬಿ.ಬಿ ನಿಂಗಯ್ಯ ಮತ್ತು ಶ್ರವಣಬೆಳಗೋಳದ  ಸಿಎನ್ ಬಾಲಕೃಷ್ಣ  ಅವರು ಅರ್ಜಿ ಸಲ್ಲಿಸಿದ್ದರು. ಸ್ಪೀಕರ್ ಕೋಳಿವಾಡ್‌  ಅವರು ಇಬ್ಬರು ಶಾಸಕರುಗಳಿಗೆ ನೋಟೀಸ್ ನೀಡಿ ವಿವರಣೆ ನೀಡುವಂತೆ ಸೂಚಿಸಿದ್ದರು. ಇಂದು ಸ್ವೀಕರ್‌ ಅವರು ಇಬ್ಬರು ಶಾಸಕರಿಂದ ವಿವರಣೆ ಪಡೆದರು.
ಇತ್ತೀಚೆಗೆ ರಾಜ್ಯಸಭೆ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿ ಬಿಎಂ ಫಾರೂಕ್ ಗೆ ಮತಚಲಾಯಿಸಬೇಕೆಂದು ಜೆಡಿಎಸ್‌ ಪಕ್ಷ ವಿಪ್ ಜಾರಿ ಮಾಡಿತ್ತು,  ವಿಪ್ ಉಲ್ಲಂಘಿಸಿ 8 ಶಾಸಕರು ಅಡ್ಡಮತದಾನ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News