ಬಿಹಾರದ ಶಾಸಕನಿಂದ ಬ್ಯಾಂಕ್ ಅಧಿಕಾರಿಗೆ ಕಪಾಳಮೋಕ್ಷ
Update: 2016-07-30 17:11 GMT
ಕಥಿಹಾರ್,ಜು.30: ಬಿಹಾರದ ಕಥಿಹಾರ್ ಜಿಲ್ಲೆಯ ಗ್ವಾಲ್ಟೋಲಿಯಲ್ಲಿ ಬ್ಯಾಂಕ್ ಮ್ಯಾನೇಜರ್ಯವರಿಗೆ ಕಪಾಳಮೋಕ್ಷ ಮಾಡಿದ ಆರೋಪದಲ್ಲಿ ಬಲಿರಾಮಪುರ ವಿಧಾನಸಭಾ ಕ್ಷೇತ್ರದ ಸಿಪಿಐ(ಎಂಎಲ್) ಶಾಸಕ ಮೆಹಬೂಬ ಆಲಂ ರವರ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.
ಶಾಸಕರು ತನಗೆ ಕಪಾಳಮೋಕ್ಷ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಶಾಖೆಯನ್ನು ಬಲವಂತದಿಂದ ಮುಚ್ಚಿ ಸಲು ಯತ್ನಿಸಿದ್ದು, ತನ್ನ ಕರ್ತವ್ಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡಿದ್ದಾರೆ ಎಂದು ಅಲಹಾಬಾದ್ ಬ್ಯಾಂಕ್ನ ಗ್ವಾಲ್ಟೋಲಿ ಶಾಖೆಯ ವ್ಯವಸ್ಥಾಪಕ ರಾಕೇಶ್ ರಂಜನ್ರವರು ಶುಕ್ರವಾರ ಎಸ್ಪಿ ಸಿದ್ಧಾರ್ಥ ಮೋಹನ್ ಜೈನ್ ಅವರಿಗೆ ದೂರು ಸಲ್ಲಿಸಿದ್ದರು. ಕಪಾಳಮೋಕ್ಷದ ದೃಶ್ಯವು ಬ್ಯಾಂಕ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದನ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.