ಈ ದೇವಳದ ಒಂದು ಹುಂಡಿಯ ಹಣ ಕ್ಯಾನ್ಸರ್ ರೋಗಿಗಳಿಗೆ

Update: 2016-08-11 10:32 GMT

ಚಿರಯಿನ್‌ಕೀಯ್, ಆ.11: ಮುಡಪ್ಪುರಂ ದೇವಿ ದೇವಸ್ಥಾನದ ಮುಂಭಾಗದಲ್ಲಿ ಇರಿಸಲಾಧ ಒಂದು ಕಾಣಿಕೆ ಡಬ್ಬಿಯಲ್ಲಿ ಸಂಗ್ರಹವಾಗುವ ಸಂಪೂರ್ಣ ಹಣವನ್ನು ಕ್ಯಾನ್ಸರ್ ರೋಗಿಗಳಿಗೆ ವಿನಿಯೋಗಿಸಲು ದೇವಸ್ಥಾನದ ಆಡಳಿತ ಮಂಡಳಿ ಮುಂದಾಗಿದೆ ಎಂದು ವರದಿಯಾಗಿದೆ.

  2015 ಫ್ರೆಬ್ರವರಿ ತಿಂಗಳಲ್ಲಿ ದೇವಳದ ಮುಂಭಾಗದ ಪ್ರವೇಶದ್ವಾರದ ಬಳಿ ಕಾಣಿಕೆ ಡಬ್ಬಿಯನ್ನು ಇರಿಸಲಾಗಿದೆ, ಎರಡು ವರ್ಷದ ಮೊದಲು ದೇವಳದ ಉತ್ಸವದ ವೇಳೆ ನಡೆದಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಬ್ಬರು ಮಾನವರ ಸೇವೆಯ ಮಹತ್ವವನ್ನು ವಿವರಿಸಿದ್ದರು. ಇದು ದೇವಸ್ಥಾನದ ಆಡಳಿತ ಮಂಡಳಿಗೆ ಪ್ರೇರಣೆಯಾದ ಹಿನ್ನೆಲೆಯಲ್ಲಿ ಕ್ಯಾನ್ಸರ್‌ ರೋಗಿಗಳಿಗಾಗಿ ಹುಂಡಿ ಸ್ಥಾಪಿಸಲು ಮುಂದೆ ಬಂದರು ಎನ್ನಲಾಗಿದೆ. . ಈವರೆಗೆ ಈ ಡಬ್ಬಿಯಲ್ಲಿ ಸಂಗ್ರಹವಾದ ಹಣದಲ್ಲಿ ತಲಾ 2000 ರೂಪಾಯಿಯಂತೆ ಐವರು ಕ್ಯಾನ್ಸರ್ ರೋಗಿಗಳಿಗೆ ವಿತರಿಸಲಾಗಿದೆ. ಕಾಣಿಕೆ ಡಬ್ಬಿಯನ್ನು ತೆರೆದು ಅದರಲ್ಲಿ ಸಂಗ್ರಹವಾದ ಹಣದಿಂದ ಕ್ಯಾನ್ಸರ್ ರೋಗಿಗಳಿಗೆ ಎರಡನೆ ಹಂತದ ಹಣವನ್ನು ನೀಡಲಿದ್ದೇವೆ ಎಂದು ದೇವಳ ಟ್ರಸ್ಟ್ ಅಧ್ಯಕ್ಷ ವಿಪಿನಚಂದ್ರನ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News