‘‘ನಗರದಿಂದ ನಿಮಗೆ ಒಂದು ಪಲ್ಲಕ್ಕಿಯನ್ನು ಕಳಿಸುವಂತೆ ಆದೇಶಿಸಲಾಗಿದೆ’’

Update: 2017-09-09 12:58 GMT

ಶ್ರೀಂಗೇರಿ ಶ್ರೀ ಸಚ್ಚಿದಾನಂದ ಸ್ವಾಮಿಗಳು, ಶ್ರೀಮಠ ಪರಮಹಂಸ ಮತ್ತು ಇತರ ಸಾಂಪ್ರದಾಯಿಕ ಮತ್ತು ಧಾರ್ಮಿಕ ನಾಮಾಂಕಿತರಾದವರಿಗೆ,

ಟಿಪ್ಪು– ಸುಲ್ತಾನ್ ಬಹದ್ದೂರರ ಸಲಾಮ್‌ಗಳು. ಸರಕಾರದ ನಿರಂತರ ವಿಜಯಕ್ಕಾಗಿ ಭಗವಂತನ ಹಾಗೂ ಶ್ರೀ ಮಠದ ಆಶೀರ್ವಾದಗಳನ್ನು ಪಡೆದಿದ್ದೇವೆ.ನಾವು ಎರಡು ಸಂದೇಶಗಳನ್ನು ನಿಮಗೆ ಕಳುಹಿಸುತ್ತಿದ್ದೇವೆ. ಈ ಸಂದೇಶಗಳನ್ನು ನರಸಿಂಹ ಶಾಸ್ತ್ರಿಗೆ ತಲುಪಿಸತಕ್ಕದ್ದು. ನಿಮ್ಮ ಬೇಡಿಕೆಯಂತೆ ಮಠದಿಂದ ಲೂಟಿಯಾಗಿರುವ ಸುಮಾರು 60 ಲಕ್ಷ ಮೌಲ್ಯದ ಮನೆ ಮತ್ತು ವಸತಿಗಳನ್ನು ಅವರು ಕಲ್ಪಿಸುತ್ತಾರೆ. ನಿಮ್ಮ ನಿರಂತರ ಆಶೀರ್ವಾದವನ್ನು ನಾವು ಕೋರುತ್ತೇವೆ. ದಯವಿಟ್ಟು ಮಂಡಲ ಪ್ರಕ್ರಿಯೆಯನ್ನು ಸಾಂಗವಾಗಿ ನಿರ್ವಹಿಸಿ ಸಹಸ್ರ ಚಂಡಿ ಜಪವನ್ನು ಮಾಡಿರಿ. ನಗರದಿಂದ ನಿಮಗೆ ಒಂದು ಪಲ್ಲಕ್ಕಿಯನ್ನು ಕಳಿಸುವಂತೆ ಆದೇಶಿಸಲಾಗಿದೆ. ಇಷ್ಟೊತ್ತಿಗೆ ನೀವು ಅದನ್ನು ಪಡೆದಿರಬಹುದು. ನಿಮ್ಮ ವೈಯಕ್ತಿಕ ಉಪಯೋಗಕ್ಕಾಗಿ ಆರಾಮವಾಗಿರುವ ಒಂದು ಪಲ್ಲಕ್ಕಿಯನ್ನು ಕಳುಹಿಸಲಾಗಿದೆ. ನೀವು ಸಂತೃಪ್ತರಾದಿರಿ ಎಂದು ತಿಳಿಸಲು ನಮಗೆ ಪತ್ರ ಬರೆಯಿರಿ. ಇತರ ವಿವರಗಳನ್ನು ವೆಂಕಟರಾಮ ಜೋಯಿಸ್ ಅವರಿಂದ ಪಡೆದುಕೊಳ್ಳತಕ್ಕದ್ದು. ದಿನಾಂಕ ಬಹುಳ 26, ಮಾಹೆ ದಿರಸಾಲ ಜಬರಾಜ, ಸನ್ 1219, ಬರೆದವರು ಮುನ್ಷಿ ನರಸಯ್ಯ ಸಹಿ ನಬಿ ಮಲಿಕ್.

                                                                ***

ಶ್ರಿಂಗೇರಿ ಶ್ರೀ ಸಚ್ಚಿದಾನಂದ ಸ್ವಾಮಿಗಳು, ಶ್ರೀಮಠ ಪರಮಹಂಸ ಮತ್ತು ಇತರ ಸಾಂಪ್ರದಾಯಿಕ ಮತ್ತು ಧಾರ್ಮಿಕ ನಾಮಾಂಕಿತರಾ ದವರಿಗೆ,

ಟಿಪ್ಪುಸುಲ್ತಾನ್ ಬಹದ್ದೂರ್‌ರ ಸಲಾಮುಗಳು. ನೀವು ಸುರಕ್ಷಿತವಾಗಿ ಹಿಂದಿರುಗಿರುವಿರೆಂದು ತಿಳಿದು ಸಂತೋಷವಾಯಿತು. ನಿಮ್ಮ ವೈಯಕ್ತಿಕ ಪೂಜಾ ಉಪಯೋಗಕ್ಕಾಗಿ ಒಂದು ಶಲ್ಯವನ್ನು ಕಳಿಸಿದ್ದೇವೆ. ಅದರ ಜೊತೆಗೆ ಪಚ್ಚೆ ಹರಳಿನ ಲಿಂಗ ಮತ್ತು ಶಿವಲಿಂಗವನ್ನು ಕಳಿಸಿದ್ದೇವೆ, ದಯವಿಟ್ಟು ಸ್ವೀಕರಿಸಬೇಕು. ನಿರಂತರ ಸಮೃದ್ಧಿ ಮತ್ತು ಕಲ್ಯಾಣಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸಬೇಕೆಂದು ವಿನಂತಿ ಸುತ್ತೇನೆ.

Writer - ಡಾ॥ಲಕ್ಷ್ಮೀಪತಿ.ಸಿ.ಜೆ

contributor

Editor - ಡಾ॥ಲಕ್ಷ್ಮೀಪತಿ.ಸಿ.ಜೆ

contributor

Similar News